
ಆಗ್ರಾ: ಮಥುರಾದ ಫರಾಹ್ನಲ್ಲಿರುವ ಆರ್ಎಸ್ಎಸ್ ನಿರ್ವಹಿಸುವ ದೀನ ದಯಾಳ್ ಧಾಮ್ ಫರ್ಮಾಕ್ಯುಟಿ ಕಲ್ ಪ್ರಯೋಗಾಲಯವು, ಗೋವಿನ ಮೂತ್ರದಿಂದ ತಯಾರಿಸಲಾದ ವೈದ್ಯಕೀಯ ಸಾಮಗ್ರಿಗಳು ಮತ್ತು ರಸಗೊಬ್ಬರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ.
ಇದಲ್ಲದೇ ಮೋದಿ ಮತ್ತು ಯೋಗಿ ಆದಿತ್ಯನಾಥ್ ಅವರ ಕುರ್ತಾಗಳನ್ನೂ ಸಿದ್ಧಪಡಿಸಿದೆ. ಈ ಬಗ್ಗೆ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿದ ದೀನ ದಯಾಳ್ ಧಾಮ್ನ ಸಹಾಯಕ ಕಾರ್ಯದರ್ಶಿ ಮನಿಷ್ ಗುಪ್ತ, ‘ಕಾಮಧೇನು ಎಂದು ಹೆಸರಿಸಲಾಗುವ ಗೋವಿನ ಗಂಜಲಿನಿಂದ ತಯಾರಾದ ವಸ್ತುಗಳು ಶೀಘ್ರದಲ್ಲೇ ಗ್ರಾಹಕರಿಗೆ ಲಭ್ಯವಾಗಲಿವೆ. ಯಾವುದೇ ರಸಾಯನಿಕ ಅಂಶಗಳನ್ನು ಬಳಸದ ಕೇವಲ ಗೋವಿನ ಗಂಜಲು ಮತ್ತು ಸಗಣಿ ಬಳಕೆ ಮಾಡಿದ ಸೋಪ್, ಮುಖದ ತ್ವಚೆಗೆ ಬಳಸುವ ದ್ರವ್ಯ ಮತ್ತು ಸುಗಂಧ ದ್ರವ್ಯಗಳು ಇವೆ,' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.