
ಬೆಂಗಳೂರು: ‘ಲೀಡರ್' ಚಿತ್ರದ ಶೀರ್ಷಿಕೆಯ ಬೆನ್ನಲ್ಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮತ್ತೊಂದು ಚಿತ್ರದ ಟೈಟಲ್ ವಿವಾದ ಸೃಷ್ಟಿಯಾಗಿದೆ. ಹೊಯ್ಸಳ ಫಿಲಂಸ್ ಸಂಸ್ಥೆ ನೋಂದಣಿ ಕೋರಿ ಸಲ್ಲಿಸಿದ್ದ ‘ಸನ್ನಾಫ್ ವಿಷ್ಣುವರ್ಧನ್' ಟೈಟಲ್ಗೆ ಅನುಮತಿ ನೀಡಲು ವಾಣಿಜ್ಯ ಮಂಡಳಿ ನಿರಾಕರಿಸಿದೆ.
ಈಗಾಗಲೇ ‘ ವಿಷ್ಣುವರ್ಧನ್ 2' ಶೀರ್ಷಿಕೆಯಲ್ಲಿ ಒಂದು ಚಿತ್ರ ತೆರೆಕಂಡಿದೆ. ಇದೇ ಶೀರ್ಷಿಕೆಯನ್ನು ಮತ್ತೊಮ್ಮೆ ನೀಡಲು ಬರುವುದಿಲ್ಲ. ವಾಣಿಜ್ಯ ಮಂಡಳಿ ಪ್ರಕಾರ ಒಂದೇ ಶೀರ್ಷಿಕೆ ಮರು ಬಳಕೆಗೆ ಹತ್ತು ವರ್ಷ ಆಗಲೇಬೇಕು. ಈ ಹಿನ್ನೆಲೆಯಲ್ಲಿ ತಾವು ಪರ್ಯಾಯ ಶೀರ್ಷಿಕೆ ಸೂಚಿಸುವಂತೆ ವಾಣಿಜ್ಯ ಮಂಡಳಿಯು ಹೊಯ್ಸಳ ಫಿಲಂಸ್ಗೆ ತಿಳಿಸಿದೆ.
ವಾಣಿಜ್ಯ ಮಂಡಳಿಯ ಈ ಕ್ರಮವನ್ನು ಹೊಯ್ಸಳ ಫಿಲಂಸ್ ಸಂಸ್ಥೆಯ ಮಾಲೀಕ ಹಾಗೂ ನಿರ್ಮಾಪಕ ಶ್ರೀನಿವಾಸ ಮೂರ್ತಿ ವಿರೋಧಿಸಿದ್ದಾರೆ. ವಾಣಿಜ್ಯ ಮಂಡಳಿಯ ಈ ಕ್ರಮ ದುರುದ್ದೇಶಪೂರ್ವಕವಾಗಿದೆ. ಗಣ್ಯ ವ್ಯಕ್ತಿಗಳ ಹೆಸರನ್ನು ಶೀರ್ಷಿಕೆಗೆ ಬಳಸುವುದು ಸರಿಯಲ್ಲ ಎಂದು ಹೇಳಿದೆ. ಆದರೆ ಈಗಾಗಲೇ ವಾಣಿಜ್ಯ ಮಂಡಳಿಯಲ್ಲಿ ‘ರಾಜ್-ವಿಷ್ಣು' ಮತ್ತು ‘ಮಿಸ್ಟರ್ ಮೋದಿ' ಹೆಸರಲ್ಲಿ ಶೀರ್ಷಿಕೆ ನೋಂದಣಿ ಆಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ವಾಣಿಜ್ಯ ಮಂಡಳಿ ಈ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶಿಸುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.