ಅಬಕಾರಿಗೂ ವಿಜಯಲಕ್ಷ್ಮೀಗೂ ಏನು ಸಂಬಂಧ? ಪತ್ರಕರ್ತರ ಪ್ರಶ್ನೆಗೆ ರೇಣುಕಾಚಾರ್ಯ ಗರಂ

Published : Dec 20, 2016, 11:24 AM ISTUpdated : Apr 11, 2018, 12:51 PM IST
ಅಬಕಾರಿಗೂ ವಿಜಯಲಕ್ಷ್ಮೀಗೂ ಏನು ಸಂಬಂಧ? ಪತ್ರಕರ್ತರ ಪ್ರಶ್ನೆಗೆ ರೇಣುಕಾಚಾರ್ಯ ಗರಂ

ಸಾರಾಂಶ

ನನಗೆ ಉತ್ತರ ಕೊಡುವಲ್ಲಿ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿಯಿಂದ ನೀವು ಪ್ರಶ್ನೆ ಕೇಳಬೇಕು ಅಂತ ತಾಕೀತು ಮಾಡಿದರು. ನಾನು ಇಲಾಖೆಯ ಸಚಿವನಾಗಿ,ಉಸ್ತುವಾರಿ ಸಚಿವನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದೇನೆ ಅನಗತ್ಯ ಪ್ರಶ್ನೆ ಕೇಳಬೇಡಿ ಎಂದರು.

ಬಳ್ಳಾರಿ(ಡಿ.20): ಅಬಕಾರಿ ಇಲಾಖೆಗೂ ವಿಜಯಲಕ್ಷ್ಮೀ ಎಂಬ ಹೆಸರಿಗೆ ಏನು ಸಂಬಂಧ? ಇದು ಪತ್ರಕರ್ತರೊಬ್ಬರು ಬಳ್ಳಾರಿಯಲ್ಲಿ ಮಾಜಿ ಸಚಿವ ರೇಣಕಾಚಾರ್ಯ ಕೇಳಿದ ಪ್ರಶ್ನೆ.  ಪತ್ರಕರ್ತರ ಈ ಪ್ರಶ್ನೆಗೆ ಕೆಂಡಾಮಂಡಲರಾದ ರೇಣುಕಾಚಾರ್ಯ,ವಾಗ್ವಾದ ನಡೆಸಿದರು. ನಾನು ಇಲ್ಲಿ ಬರ ವೀಕ್ಷಣೆಗೆ ಬಂದಿದ್ದೇನೆ. ಆ ಬಗ್ಗೆ ಅನಗತ್ಯ ಪ್ರಶ್ನೆ ಕೇಳಬೇಡಿ ಎಂದು ಗರಂ ಆದರು.

ನನಗೆ ಉತ್ತರ ಕೊಡುವಲ್ಲಿ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿಯಿಂದ ನೀವು ಪ್ರಶ್ನೆ ಕೇಳಬೇಕು ಅಂತ ತಾಕೀತು ಮಾಡಿದರು. ನಾನು ಇಲಾಖೆಯ ಸಚಿವನಾಗಿ,ಉಸ್ತುವಾರಿ ಸಚಿವನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದೇನೆ ಅನಗತ್ಯ ಪ್ರಶ್ನೆ ಕೇಳಬೇಡಿ ಎಂದರು.

ಮಾಜಿ ಅಬಕಾರಿ ಸಚಿವ ಎಚ್‌.ವೈ.ಮೇಟಿ ಅವರೊಂದಿಗೆ ರಾಸಲೀಲೆಯಲ್ಲಿ ಭಾಗಿಯಾಗಿದ್ದಾಳೆ ಎನ್ನುವ ಮಹಿಳೆಯ ಹೆಸರು ವಿಜಯಲಕ್ಷ್ಮೀ, ಈ ಹಿಂದೆ ನರ್ಸ್‌ ಜಯಲಕ್ಷ್ಮೀ-ರೇಣುಕಾಚಾರ್ಯ ಪೋಟೋಗಳು ಭಾರೀ  ವೈರಲ್‌ ಆಗಿದ್ದವು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಂಡ್ಯದಲ್ಲಿ ಸೆಮಿಕಂಡಕ್ಟರ್ ಕಂಪನಿಗೆ 100 ಎಕರೆ ಜಾಗ; ಕುಮಾರಸ್ವಾಮಿಗೆ ಎಂ.ಬಿ. ಪಾಟೀಲ ಪತ್ರ
ನಾಯಿ ಕಡಿತಕ್ಕೆ ಚಿಕಿತ್ಸೆ ಪಡೆದರೂ ಒಂದು ತಿಂಗಳ ನಂತರ ಬಾಲಕಿ ಸಾವು