’ಕಿಲ ಕಿಲ ನಾವ್ ಬರಕ್ಕಿಲ...!’: ರಾಜೀನಾಮೆ ಹಿಂಪಡೆಯೋ ಮಾತೇ ಇಲ್ಲ ಎಂದ ಅತೃಪ್ತರು!

Published : Jul 09, 2019, 02:15 PM ISTUpdated : Jul 09, 2019, 05:13 PM IST
’ಕಿಲ ಕಿಲ ನಾವ್ ಬರಕ್ಕಿಲ...!’: ರಾಜೀನಾಮೆ ಹಿಂಪಡೆಯೋ ಮಾತೇ ಇಲ್ಲ ಎಂದ ಅತೃಪ್ತರು!

ಸಾರಾಂಶ

ಯಾರೂ ರಾಜೀನಾಮೆ ವಾಪಸ್ ಪಡೆಯಲ್ಲ| ನಾವು ಮುಂಬೈಗೆ ಆಟ ಆಡಲು ಬಂದಿಲ್ಲ| ಅಗತ್ಯ ಬಿದ್ದರೆ ರಾಜಕೀಯ ಬಿಟ್ಟು, ಮನೆಯಲ್ಲಿ ಕೂರುತ್ತೇವೆ

ಬೆಂಗಳೂರು[ಜು.09]: 'ರಾಜಕೀಯದಲ್ಲಿ ಇಲ್ಲದಿದ್ರೂ ಪರವಾಗಿಲ್ಲ ಆದರೆ ರಾಜೀನಾಮೆ ವಾಪಸ್ ಪಡೆಯೋ ಮಾತೇ ಇಲ್ಲ' ಎನ್ನುವ ಮೂಲಕ ಕಾಂಗ್ರೆಸ್ ಎಸೆದಿದ್ದ ಅನರ್ಹತೆ ಅಸ್ತ್ರಕ್ಕೆ ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಡೋಂಟ್ ಕೇರ್ ಎಂದಿದ್ದಾರೆ.

"

ಸಿದ್ದರಾಮಯ್ಯ ಎಸೆದ ಅನರ್ಹತೆ ಅಸ್ತ್ರಕ್ಕೆ ಮುಂಬೈ ಸೇರಿರುವ ಅತೃಪ್ತ ಶಾಸಕ ಭೈರತಿ ಬಸವರಾಜ್ ಟಾಂಗ್ ನೀಡುತ್ತಾ 'ನಾವು ಒಗ್ಗಟ್ಟಾಗಿದ್ದೇವೆ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲ್ಲ. ನಮ್ಮ ಕೆಲಸ ಆಗದಿದ್ದರೆ ನಾವ್ಯಾಕೆ ಬಗ್ಗಬೇಕು. ಶಾಪಿಂಗ್ ಹಾಗೂ ದೇವರ ದರ್ಶನಕ್ಕೆ ಮುಂಬೈಗೆ ಬಂದಿದ್ದೇವೆ. 7 ಬಾರಿ ಶಾಸಕ ರಾಮಲಿಂಗಾ ರೆಡ್ಡಿಯವರಿಗೆ ಅನ್ಯಾಯವಾಗಿದೆ. ಈಗ ರೋಷನ್ ಬೇಗ್ ರಾಜೀನಾಮೆ ನೀಡಿದ್ದಾರೆ. ಅವರು ಅನರ್ಹ ಮಾಡಿದರೂ ಸರಿಯೇ, ರಾಜೀನಾಮೆ ವಾಪಸ್ ಪಡೆಯಲ್ಲ' ಎಂದಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿ ನಾಯಕರು ಕೂಡಿಟಿದ್ದಾರಾ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿರುವ ಅತೃಪ್ತ ಶಾಸಕ ಬಿ. ಸಿ ಪಾಟೀಲ್ 'ರೀ ನಮ್ಮನ್ನು ಯಾರೂ ಕೂಡಿಟ್ಟಿಲ್ಲ. ಸ್ಪೀಕರ್ ಕರೆದರೆ ಸಂಜೆಯೇ ತೆರಳಲು ಸಿದ್ಧ. ಯಾವ್ ಕುದುರೆ ವ್ಯಾಪಾರ ಕಣ್ರೀ.. ಅದು ಯಾರಿಗೆ ಬೇಕು. ನಾವು ಮುಂಬೈಗೆ ಆಟ ಆಡಲು ಬಂದಿಲ್ಲ' ಎಂದಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾದು ಕಾದು ಸುಸ್ತಾದ ಶೆಹಬಾಜ್‌ ಷರೀಫ್‌, ಟರ್ಕಿ ಅಧ್ಯಕ್ಷರ ಜೊತೆ ಪುಟಿನ್‌ ಮೀಟಿಂಗ್‌ ವೇಳೆ ಒಳನುಗ್ಗಿದ ಪಾಕ್‌ ಪ್ರಧಾನಿ!
ಬೆಂಗಳೂರಿನಲ್ಲಿ ಇಷ್ಟೊಂದು ಚಳಿಗೆ ಕಾರಣವೇನು? ಮುಂದಿನ ಮೂರು ದಿನ ಉತ್ತರ ಕರ್ನಾಟಕದಲ್ಲಿ ಶೀತಗಾಳಿ!