
ಮುಂಬೈ: ಮುಂಬೈನ ಎಲ್ಫಿನ್ಸ್ಟೋನ್ ರಸ್ತೆಯ ರೈಲು ನಿಲ್ದಾಣದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಕಾಲ್ತುಳಿತದ ನೈಜ ಕಾರಣವನ್ನು ತನಿಖಾ ತಂಡಗಳು ಪತ್ತೆ ಮಾಡಿವೆ.
ಬ್ರಿಜ್ ಮೇಲೆ ಸಿಲುಕಿದ್ದ ಹೂವು ಮಾರಾಟಗಾರನೊಬ್ಬ ‘ಫೂಲ್ ಗಿರ್ ಗಯಾ’ (ಹೂವುಗಳು ಬಿದ್ದವು) ಎಂದು ಕೂಗಿಕೊಂಡ. ಇದನ್ನು ಜನರು ‘ಪೂಲ್ ಗಿರ್ ಗಯಾ’ (ಸೇತುವೆ ಕುಸಿಯಿತು) ಎಂದು ತಪ್ಪಾಗಿ ಅರ್ಥೈಸಿದ್ದೇ ಸೇತುವೆ ಕುಸಿತದ ವದಂತಿ ಹಬ್ಬಲು ಕಾರಣ ಆಯಿತು ಎಂದು ಪತ್ತೆ ಮಾಡಿದ್ದಾರೆ.
ಕಾಲ್ತುಳಿತದಲ್ಲಿ ಬದುಕುಳಿದ ಓರ್ವ ವಿದ್ಯಾರ್ಥಿಯು ಈ ಮಾಹಿತಿಯನ್ನು ರೈಲ್ವೆ ತನಿಖಾ ತಂಡಗಳಿಗೆ ನೀಡಿದ್ದಾನೆ. ಆದರೆ ಇದರ ಜತೆಗೆ ಇತರ ಕಾರಣಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ತನಿಖೆದಾರರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.