
ಲಾಸ್ ಎಂಜಲೀಸ್(ಜು.31): ಕಡಲ ಸಿಂಹವೊಂದು ತಿಮಿಂಗಿಲ ಬಾಯಲ್ಲಿ ಸಿಕ್ಕು ಕೂಗಳತೆ ಅಂತರದಲ್ಲಿ ಪಾರಾದ ಅಪರೂದ ಘಟನೆ ಕ್ಯಾಲಿಫೋರ್ನಿಯಾದ ಮಾಂಟೆರೆ ಕೊಲ್ಲಿಯಲ್ಲಿ ನಡೆದಿದೆ.
ಚೇಸ್ ಡೆಕ್ಕರ್ ಎಂಬ ಸಮುದ್ರ ಜೀವಶಾಸ್ತ್ರಜ್ಞ ಈ ಅಪರೂಪದ ಘಳಿಗೆಯನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ತಮ್ಮ ಜೀವನದಲ್ಲಿ ಹಿಂದೆಂದೂ ಇಂತಹ ಘಟನೆಯನ್ನು ನೋಡಿರಲಿಲ್ಲ ಎಂದು ಹೇಳಿದ್ದಾರೆ.
ಗುಂಪಿನಲ್ಲಿ ಆಹಾರ ಅರಸುತ್ತಾ ಹೊರಟಿದ್ದ ತಿಮಿಂಗಿಲದ ಎದುರಿಗೆ ಏಕಾಏಕಿ ಕಡಲ ಸಿಂಹ ಬಂದಿದೆ. ಈ ವೇಳೆ ಕಡಲ ಸಿಂಹವನ್ನು ಎಳೆದು ಬಾಯಿಗೆ ಹಾಕಿಕೊಂಡ ತಿಮಿಂಗಿಲ, ಅದನ್ನು ನುಂಗಬೇಕು ಎನ್ನುವಷ್ಟರಲ್ಲಿ ಕಡಲ ಸಿಂಹ ತಿಮಿಂಗಿಲದ ಬಾಯಿಂದ ತಪ್ಪಿಸಿಕೊಂಡು ಹೋಗಿದೆ.
ಚೇಸ್ ಡೆಕ್ಕರ್ ಅವರ ಈ ಫೋಟೋ ಇದೀಗ ಭಾರೀ ವೈರಲ್ ಆಗಿದ್ದು, ಅಪರೂಪದ ಫೋಟೋ ಕ್ಲಿಕ್ಕಿಸಿದ ಚೇಸ್ ಡೆಕ್ಕರ್ ಅವರಿಗೆ ಎಲ್ಲಡೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.