
ಮಂಡ್ಯ(ಅ.23): ಇತ್ತೀಚೆಗಷ್ಟೆ ಯಾರಿಗೂ ತಿಳಿಸದೆ ಮಂಡ್ಯದ ನೂತನ ಮನೆಗೆ ಏಕಾಂಗಿಯಾಗಿ ತಾನೇ ಕಾರ್ ಡ್ರೈವ್ ಮಾಡಿಕೊಂಡು ಬಂದು ವೀಕ್ಷಣೆ ನಡೆಸಿ ಹೋಗಿದ್ದ ಮಂಡ್ಯದ ಮಾಜಿ ಸಂಸದೆ ರಮ್ಯಾ ಇಂದು ಕೂಡ ಮಂಡ್ಯದ ನೂತನ ಮನೆಗೆ ಆಗಮಿಸಿ ಮನೆಯ ವೀಕ್ಷಣೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.
ವಿದ್ಯಾನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಮ್ಮ ಮನೆಯನ್ನು ವೀಕ್ಷಿಸಿದ ಬಳಿಕ ಸ್ನೇಹಿತೆಯೋರ್ವಳ ಆ್ಯಕ್ಟಿವ್ ಹೊಂಡಾ ಸ್ಕೂಟರ್`ನಲ್ಲಿ ಮಂಡ್ಯದ ರೈಲ್ವೆ ನಿಲ್ದಾಣದಕ್ಕೆ ತೆರಳಿದ ಸ್ಯಾಂಡಲ್'ವುಡ್ ಕ್ವೀನ್ , ಮಂಡ್ಯ ಜನರಿಗೆ ಅಚ್ಚರಿ ಮೂಡಿಸಿದ್ದಾರೆ.
CLICK HERE.. ಸ್ವಾಭಿಮಾನದ ಸುಂದರಿ ನಟಿ ಮಹಾಲಕ್ಷ್ಮೀ ಎಲ್ಲಿದ್ದಾರೆ ಗೊತ್ತಾ..?
ರಮ್ಯಾರನ್ನು ರೈಲ್ವೇ ಸ್ಟೇಷನ್'ನಲ್ಲಿ ಕಂಡ ಪ್ರಯಾಣಿಕರು ಸೆಲ್ಫೀ ತೆಗೆಯಲು ಹಾಗೂ ಆಟೋಗ್ರಾಫ್'ಗಾಗಿ ದುಂಬಾಲು ಬಿದ್ದರು. ಮಕ್ಕಳು, ಮಹಿಳೆಯರು, ಯುವಕರೊಂದಿಗೆ ಸೆಲ್ಫೀ ತೆಗೆಸಿಕೊಂಡ ರಮ್ಯಾ, ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಮೂಲಕ ಬೆಂಗಳೂರಿಗೆ ತೆರಳಿದರು. ಈ ಮಧ್ಯೆ ಮಾತನಾಡಿದ ರಮ್ಯಾ, ಕೇಂದ್ರ ಸರ್ಕಾರದ ಮಧ್ಯ ಪ್ರವೇಶದಿಂದ ಮಾತ್ರ ಕಾವೇರಿ ವಿವಾದದ ಪರಿಹಾರ ಸಾಧ್ಯ ಎಂದಿದ್ದಾರೆ. ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ವಿಚಾರ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷ ತೀರ್ಮಾನ ಮಾಡುತ್ತೆ ಎಂದು ರಮ್ಯಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.