ಕಾಂಗ್ರೆಸ್‌ ರಾಮ ಜಪ: 'ಕೈ' ಅಧಿಕಾರಕ್ಕೆ ಬಂದರೆ ಮಂದಿರ ಖಚಿತ!

Published : Jan 19, 2019, 09:27 AM ISTUpdated : Jan 19, 2019, 09:44 AM IST
ಕಾಂಗ್ರೆಸ್‌ ರಾಮ ಜಪ: 'ಕೈ' ಅಧಿಕಾರಕ್ಕೆ ಬಂದರೆ ಮಂದಿರ ಖಚಿತ!

ಸಾರಾಂಶ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಖಚಿತ| ಹಿರಿಯ ಕಾಂಗ್ರೆಸ್‌ ನಾಯಕ ಹರೀಶ್‌ ರಾವತ್‌ ಘೋಷಣೆ| ನೈತಿಕತೆ ಇಲ್ಲದ ಬಿಜೆಪಿಯಿಂದ ಮಂದಿರ ನಿರ್ಮಾಣ ಇಲ್ಲ

ಡೆಹ್ರಾಡೂನ್‌[ಜ.19]: ಮೃದು ಹಿಂದುತ್ವ ಧೋರಣೆ ಪಾಲಿಸುವ ಮೂಲಕ ಇತ್ತೀಚಿನ ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌, ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ಜಪ ಮಾಡಲು ಶುರು ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರವೇ, ರಾಮಮಂದಿರ ನಿರ್ಮಾಣ ಸಾಧ್ಯ ಎಂದು ಅದು ಹೇಳಿದೆ.

ಈ ಕುರಿತು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರಾಖಂಡದ ಮಾಜಿ ಸಿಎಂ ಮತ್ತು ಮಾಜಿ ಕೇಂದ್ರ ಸಚಿವ ಹರೀಶ್‌ ರಾವತ್‌, ‘ಬಿಜೆಪಿ ನೈತಿಕತೆಯೇ ಇಲ್ಲದವರನ್ನು ಒಳಗೊಂಡಿರುವ ಪಕ್ಷ. ಮರ್ಯಾದಾ ಪುರುಷೋತ್ತಮ ರಾಮನ ಹೆಸರಲ್ಲಿ ಭಕ್ತರಿಗೆ ಕೊಟ್ಟಮಾತನ್ನೂ ಉಳಿಸಿಕೊಳ್ಳುವ ನೈತಿಕತೆ ಅವರಿಗಿಲ್ಲ. ಸಂವಿಧಾನ ಮತ್ತು ನೈತಿಕತೆ ವಿಚಾರದಲ್ಲಿ ಇಷ್ಟುಅಧೋಗತಿಗೆ ತಲುಪುತ್ತಾರೆ ಅಂದುಕೊಂಡಿರಲಿಲ್ಲ. ಅಯೋಧ್ಯೆಯಲ್ಲೇ ರಾಮ ನಿರ್ಮಾಣ ಸಾಧ್ಯವೆಂದಾದರೆ ಅದಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. ಆಗ ರಾಮ ಮಂದಿರ ನಿರ್ಮಾಣ ಶತಸಿದ್ಧ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು