ಕೋರ್ಟ್‌ಗೆ ಹಾಜರಾದ ಹಸು, ಜಡ್ಜ್ ಕೊಟ್ರು ತೀರ್ಪು: ಕಾರಣವೇನು?

Published : Jun 16, 2019, 01:33 PM IST
ಕೋರ್ಟ್‌ಗೆ ಹಾಜರಾದ ಹಸು, ಜಡ್ಜ್ ಕೊಟ್ರು ತೀರ್ಪು: ಕಾರಣವೇನು?

ಸಾರಾಂಶ

ಮಾಲೀಕರ ನಡುವೆ ಹಸುವಿಗಾಗಿ ಕಿತ್ತಾಟ| ಹಸು ಯಾರದ್ದೆಂದು ತಿಳಿಯಲು ಸಾಕ್ಷಿಗಳನ್ನು ಕೆಳಿದ ನ್ಯಾಯಾಧೀಶ| ಮಾಲೀಕನನ್ನು ಗುರುತಿಸಲು ಕೋರ್ಟ್‌ಗೇ ಬಂತು ಹಸು!

ಜೋಧ್‌ಪುರ್[ಜೂ.16]: ಜೋಧ್ ಪುರ್ನ ಸ್ಥಳೀಯ ನ್ಯಾಯಾಲಯ ಅಚ್ಚರಿಯುತ ಘಟನೆಗೆ ಸಾಕ್ಷಿಯಾಗಿದೆ. ಶನಿವಾರದಂದು ನ್ಯಾಯಾಲಯಕ್ಕೆ ಹಸುವೊಂದನ್ನು ಹಾಜರುಪಡಿಸಲಾಗಿದ್ದು, ಬಳಿಕವಷ್ಟೇ ನ್ಯಾಯಾಧೀಶರು ಪ್ರಕರಣವೊಂದರ ತೀರ್ಪು ನೀಡಿದ್ದಾರೆ. ಅರೇ ಇದೇನಿದು...? ಅಂತೀರಾ ಇಲ್ಲಿದೆ ನೋಡಿ ವಿವರ

ಹೌದು ಹಸುವಿನ ನಿಜವಾದ ಮಾಲೀಕನಾರು ಎಂಬ ವಿವಾದ ಏರ್ಪಟ್ಟಿದ್ದು, ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಕುರಿತಾಗಿ ಪ್ರತಿಕ್ರಿಯಿಸಿರುವ ವಕೀಲರು 'ಓಂ ಪ್ರಕಾಶ್ ಹಾಗೂ ಶಾಮ್ ಸಿಂಗ್ ನಡುವೆ ಹಸುವಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 2018ರಿಂದ ವಿವಾದ ನಡೆಯುತ್ತಿದೆ. ಈ ಕುರಿತಾಗಿ ನ್ಯಾಯಾಧೀಶರು ತೀರ್ಪು ನೀಡುತ್ತಾ, ಎಲ್ಲಾ ಸಾಕ್ಷಿಗಳನ್ನು ಪರಿಗಣಿಸಿ ಹಸು ಓಂ ಪ್ರಕಾಶ್ ಗೆ ಸೇರುತ್ತದೆ ಎಂದು ಆದೇಶಿಸಿದ್ದಾರೆ' ಎಂದಿದ್ದಾರೆ.

ಈ ಪ್ರಕರಣದ ವಿಚಾರಣೆ ವೇಳೆ ಹಸುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಮೊದಲು ಮಾಹಾರಾಷ್ಟ್ರದಲ್ಲೂ ಇಂತಹುದೇ ವಿಚಿತ್ರ ಪ್ರಕರಣ ನಡೆದಿದ್ದು, ಮಹಿಳೆಯೊಬ್ಬಳು ಕೋಳಿ ಕೂಗುವುದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಿದ್ದಳು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?