ದೀಪಾವಳಿಗೆ ರೈಲ್ವೆ ಇಲಾಖೆ ಭರ್ಜರಿ ಗುಡ್ ನ್ಯೂಸ್ ನೀಡುತ್ತಿದೆ. ಹೆಚ್ಚುವರಿಯಾಗಿ ಜನರು ಈ ಸಂದರ್ಭದಲ್ಲಿ ಪ್ರಯಾಣ ಮಾಡುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ರೈಲು ಬಿಡಲು ನಿರ್ಧರಿಸಿದೆ.
ನವದೆಹಲಿ : ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದೆ. ದೀಪಾವಳಿಯ ಈ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆಯು ಹೆಚ್ಚಳವಾಗುವ ಕಾರಣ ಹೆಚ್ಚುವರಿ ರೈಲು ಬಿಡಲು ತೀರ್ಮಾನ ಮಾಡಲಾಗಿದೆ.
ಉತ್ತರ ವಲಯದ ರೈಲ್ವೆಯು ಹೆಚ್ಚುವರಿ ರೈಲು ಸೇವೆಯನ್ನು ನೀಡಲು ನಿರ್ಧರಿಸಿದೆ.
ನವೆಂಬರ್ 7, 14, 21 ರಂದು ವಿಶೇಷ ರೈಲು ಪ್ರಯಾಣಿಸಲಿದೆ. ಒಟ್ಟು 19 ಬೋಗಿಗಳನ್ನು ಈ ವಿಶೇಷ ರೈಲು ಹೊಂದಿದ್ದು, ಲೋಕಮಾನ್ಯ ತಿಲಕ್ ಟರ್ಮಿನಲ್ ನಿಂದ ಮಂಡುವಾಡಿಯ ಪ್ರದೇಶದಲ್ಲಿ ಪ್ರಯಾಣಿಸುತ್ತದೆ.
ಅಲ್ಲದೇ ದೀಪಾವಳಿ ಸಂದರ್ಭದಲ್ಲಿ ರೈಲ್ವೆ ಇಲಾಖೆ ತನ್ನ ಟಿಕೆಟ್ ದರದಲ್ಲಿಯೂ ಕೂಡ ಹೆಚ್ಚುವರಿಯಾಗಿ ಡಿಸ್ಕೌಂಟ್ ನೀಡುತ್ತಿದೆ.