ಮಹದಾಯಿ ಬಗ್ಗೆ ನಿಲುವು ಪ್ರಕಟಿಸುತ್ತಾರಾ ರಾಹುಲ್‌..?

By Suvarna Web DeskFirst Published Feb 23, 2018, 8:23 AM IST
Highlights

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಫೆ.24ರಿಂದ ಕೈಗೊಳ್ಳಲಿರುವ ತಮ್ಮ ಎರಡನೇ ಹಂತದ ಜನಾಶೀರ್ವಾದ ಪ್ರವಾಸದ ವೇಳೆ ಮಹದಾಯಿ ವಿಚಾರದ ಬಗ್ಗೆ ತಮ್ಮ ನಿಲುವು ಪ್ರಕಟಪಡಿಸುವ ಸಾಧ್ಯತೆಯಿದೆ.

ಬೆಂಗಳೂರು : ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಫೆ.24ರಿಂದ ಕೈಗೊಳ್ಳಲಿರುವ ತಮ್ಮ ಎರಡನೇ ಹಂತದ ಜನಾಶೀರ್ವಾದ ಪ್ರವಾಸದ ವೇಳೆ ಮಹದಾಯಿ ವಿಚಾರದ ಬಗ್ಗೆ ತಮ್ಮ ನಿಲುವು ಪ್ರಕಟಪಡಿಸುವ ಸಾಧ್ಯತೆಯಿದೆ.

ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆ​ಹ​ರಿ​ಸಲು ತನ್ನಿಂದ ಆಗು​ವು​ದಿಲ್ಲ ಎಂದು ಕಾಂಗ್ರೆಸ್‌ ಹೇಳಲಿ, ಅನಂತರ ಬಿಜೆಪಿ ಈ ವಿಚಾ​ರ​ದಲ್ಲಿ ಮಧ್ಯ​ಪ್ರ​ವೇ​ಶಿ​ಸು​ತ್ತದೆ ಎಂದು ಆ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸವಾಲು ಹಾಕಿದ ಬೆನ್ನಲ್ಲೇ ಗುರು​ವಾರ ಸುದ್ದಿ​ಗೋಷ್ಠಿ ನಡೆ​ಸಿದ ಕೆಪಿ​ಸಿಸಿ ಅಧ್ಯಕ್ಷ ಡಾ. ಜಿ. ಪರ​ಮೇ​ಶ್ವರ್‌ ಈ ಸುಳಿವು ನೀಡಿ​ದ​ರು.

‘ರಾಹುಲ್‌ ಗಾಂಧಿ ಫೆ. 24ರಿಂದ ಮೂರು ದಿನಗಳ ಕಾಲ ಮುಂಬೈ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವರು. ಈ ಪ್ರವಾಸದ ವೇಳೆ ಅವರು ಮಹದಾಯಿ ವಿಚಾರದಲ್ಲಿ ತಮ್ಮ ನಿಲುವು ಪ್ರಕಟಪಡಿಸುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳಿ​ದ​ರು. ರಾಹುಲ್‌ ರಾಜ್ಯ ಪ್ರವಾ​ಸದ ವೇಳೆ ಹುಬ್ಬಳ್ಳಿ, ಬೆಳಗಾವಿ ಭೇಟಿ ವೇಳೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸುವುದಾಗಿ ಮಹಾ​ದಾಯಿ ಹೋರಾ​ಟ​ಗಾ​ರರು ಬುಧವಾರ ಹೇಳಿದ್ದರು. ಈ ನಡುವೆ ಬಿಜೆಪಿ ಅಧ್ಯ​ಕ್ಷರು ಕೂಡ ಕಾಂಗ್ರೆಸ್‌ಗೆ ಸವಾಲು ಹಾಕಿ​ದ್ದರು.

click me!