
ಬೆಂಗಳೂರು (ಏ. 08): ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರೇ ಸಿಎಂ ಎಂದು ಮಾಧ್ಯಮದವರ ಜೊತೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ಮಾಡುವ ವೇಳೆ ಹೇಳಿದ್ದಾರೆ.
ಜನರ ಭಾವನೆ ಅರ್ಥಮಾಡಿಕೊಳ್ಳುವರು, ಜನರ ಜೊತೆ ಬೆರೆಯುವವರೇ ಸಿಎಂ. ಸೈದ್ಧಾಂತಿಕವಾಗಿ ಒಗ್ಗಟ್ಟು ಮೂಡಿದ್ರೆ ಮಾತ್ರ ಕೇಡರ್ ಮಟ್ಟದಲ್ಲಿ ಪಕ್ಷ ಗಟ್ಟಿಯಾಗುತ್ತದೆ ಎನ್ನುವ ಮೂಲಕ ಸಿದ್ದರಾಮಯ್ಯನವರೇ ಸಿಎಂ ಅಭ್ಯರ್ಥಿ ಎಂಬ ಸುಳಿವು ನೀಡಿದ್ದಾರೆ.
ಕಷ್ಟಪಟ್ಟು ಕೆಲಸ ಮಾಡುವವರಿಗೆ ಈ ದೇಶದಲ್ಲಿ ಏನು ಸಿಗುತ್ತಿಲ್ಲ. ಆರಾಮಗಿ ಇರುವವರಿಗೆ ಎಲ್ಲಾ ಸಿಗುತ್ತಿದೆ. ಅದನ್ನ ಕಾಂಗ್ರೆಸ್ ಸರ್ಕಾರ ಬದಲಾಯಿಸಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ನಿಂದ ನಿಮಗೆ ಅನುಕೂಲ ಆಗಿದ್ಯಾ? ಅಲ್ಲಿ ಊಟ ಮಾಡ್ತೀರಾ ಎಂದು ಪೌರ ಕಾರ್ಮಿಕರನ್ನು ಪ್ರಶ್ನಿಸಿದ್ದಾರೆ. ಹೌದು, ತುಂಬಾ ಅನುಕೂಲವಾಗಿದೆ ಎಂದು ಪೌರ ಕಾರ್ಮಿಕರು ಹೇಳಿದ್ದಾರೆ. ಸರ್ಕಾರ ಪೌರಕಾರ್ಮಿಕರ ಗುತ್ತಿಗೆ ರದ್ದು ಮಾಡಿದ ಹಿನ್ನಲೆಯಲ್ಲಿ ಮಾತನಾಡುತ್ತಾ, ನಾವು ದೆಹಲಿಯಲ್ಲಿ ಅಧಿಕಾರಕ್ಕೆ ಬರುತ್ತೇವೆ. ನಾವು ನಿಮಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಕಷ್ಟಪಡುವವರಿಗೆ ಇಲ್ಲಿ ಏನು ಸಿಕ್ತಿಲ್ಲ, ಕಷ್ಟ ಪಡದೇ ಇರುವವರಗೆ ಎಲ್ಲವೂ ಸಿಕ್ತಿದೆ. ಇದು ಭಾರತದ ಸಮಸ್ಯೆ. ಈ ಸಮಸ್ಯೆಗಳನ್ನ ಬಗೆಹರಿಸಲು ಕಾಂಗ್ರೆಸ್ ಪಕ್ಷ ಇದೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಎಲ್ಲ ಕಡೆ ಗುತ್ತಿಗೆ ನಿಯಮವನ್ನ ರದ್ದು ಮಾಡುತ್ತೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.