ವಿಶೇಷ ಅಧಿವೇಶನಕ್ಕೂ ತಟ್ಟಿದ ರಾಹುಕಾಲ ಎಫೆಕ್ಟ್: ಮಧ್ಯಾಹ್ನ 12ರ ನಂತರ ಸದನ ಆರಂಭಕ್ಕೆ ಎಚ್.ಡಿ ರೇವಣ್ಣ ಸಲಹೆ

Published : Sep 23, 2016, 07:38 AM ISTUpdated : Apr 11, 2018, 12:44 PM IST
ವಿಶೇಷ ಅಧಿವೇಶನಕ್ಕೂ ತಟ್ಟಿದ ರಾಹುಕಾಲ ಎಫೆಕ್ಟ್: ಮಧ್ಯಾಹ್ನ 12ರ ನಂತರ  ಸದನ ಆರಂಭಕ್ಕೆ ಎಚ್.ಡಿ ರೇವಣ್ಣ ಸಲಹೆ

ಸಾರಾಂಶ

ಬೆಂಗಳೂರು(ಸೆ.23): ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಷಯದಲ್ಲಿ ರಾಜ್ಯದ ನಿಲುವು ತಿಳಿಸಲು ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗಿದ್ದು, ಈ ವಿಶೇಷ ಅಧಿವೇಶನಕ್ಕೆ ರಾಹುಕಾಲ ಎಫೆಕ್ಟ್ ತಟ್ಟಿದೆ. 

ವಿಶೇಷ ಅಧಿವೇಶನ ಯಾವುದೇ ರೀತಿಯ ತೊಡಕಾಗದೆ ಯಶಸ್ವಿಯಾಗಲಿ ಎನ್ನುವ ಕಾರಣದಿಂದ ಸದನ ಆರಂಭಕ್ಕೆ ವಿಪಕ್ಷ ನಾಯಕರು ಎಚ್.ಡಿ ರೇವಣ್ಣ ಸಲಹೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ರೇವಣ್ಣ, ಮಧ್ಯಾಹ್ನ 12ರ ವರೆಗೂ ರಾಹುಕಾಲವಿದ್ದು, ನಂತರ ಕಲಾಪ ಆರಂಭಿಸುವಂತೆ ಸಲಹೆ ನೀಡಿದ್ದಾರೆ. 

ಸದನ ಸಲಹಾ ಸಮಿತಿ ಸಭೆಯಲ್ಲಿ ವಿಪಕ್ಷ  ನಾಯಕರಾದ ಜಗದೀಶ್ ಶೆಟ್ಟರ್, ಆರ್. ಅಶೋಕ್ ಅವರು ರೇವಣ್ಣ ಬಳಿ ಸಲಹೆ ಹಿನ್ನಲೆಯಲ್ಲಿ ಮಧ್ಯಾಹ್ನ 12 ಗಂಟೆ ಬಳಿಕ ಕಲಾಪ  ಆರಂಭ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಕಲಾಪವು ರಾಹುಕಾಲ ಕಳೆದ ನಂತರ ಮಧ್ಯಾಹ್ನ 12ರ ನಂತರ ಆರಂಭವಾಗಿದೆ.  
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಷರ ಲೋಕದ ಅವಧಾನಿ: ಕನ್ನಡ ಅಧ್ಯಾಪಕ ಜಿ.ಬಿ.ಹರೀಶರ ಪತ್ರಿಕಾ ಪ್ರತಿಭೆ
ನಿಮ್ಮ ಆರೋಗ್ಯಕ್ಕೆ ನಿಜವಾದದ್ದೇ ಅರ್ಹತೆ: ನಕಲಿ ಉತ್ಪನ್ನಗಳ ವಿರುದ್ಧ ಹರ್ಬಾಲೈಫ್ ಇಂಡಿಯಾದ ಉಪಕ್ರಮ