
ಬೆಂಗಳೂರು(ನ. 07): ಮಾಸ್ತಿಗುಡಿ ಚಿತ್ರೀಕರಣ ವೇಳೆ ಇಬ್ಬರು ಉದಯೋನ್ಮುಖ ನಟರು ದುರಂತ ಸಾವನ್ನಪ್ಪಿದ ಘಟನೆ ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಈ ಘಟನೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಾಸ್ತಿಗುಡಿ ಚಿತ್ರತಂಡ ಇಂಥ ಕೆಲ ಪ್ರಮುಖ ಪ್ರಶ್ನೆಗಳನ್ನು ಉತ್ತರಿಸುತ್ತದಾ?
1) ಈಜು ಬಾರದವರನ್ನು ನೀರಿಗೆ ಧುಮುಕಿಸಿದ್ದು ಎಷ್ಟು ಸರಿ?
2) ಮೊದಲ ಮಹಡಿಯಿಂದ ಕೆಳಗೆ ನೋಡಲು ಭಯಪಡುವವನನ್ನು ಹೆಲಿಕಾಪ್ಟರ್'ನಿಂದ ಕೆಳಗೆ ಧುಮುಕಿಸಿದ್ದು ಯಾಕೆ?
3) ಜಲಾಶಯದಲ್ಲಿ ಶೂಟಿಂಗ್ ಮಾಡಬಾರದು, ಅದರಲ್ಲೂ ಏರಿಯಲ್ ಶಾಟ್ ತೆಗೆಯಬಾರದು ಎಂದು ಬಿಡಬ್ಲ್ಯೂಎಸ್'ಎಸ್'ಬಿ ಸ್ಪಷ್ಟವಾಗಿ ಹೇಳಿದ್ದರೂ ಆ ಕೆಲಸ ಮಾಡಿದ್ದು ಯಾಕೆ?
4) ದುರಂತ ಸಾವನ್ನಪ್ಪಿದ ರಾಘವ್ ಉದಯ್ ಮತ್ತು ಅನಿಲ್'ಗೆ ಯಾಕೆ ಲೈಫ್ ಜಾಕೆಟ್ ತೊಡಿಸಲಿಲ್ಲ?
5) ಅತ್ಯಗತ್ಯವಾದ ಸ್ಪೀಡ್ ಬೋಟ್ ಯಾಕೆ ಇಟ್ಟುಕೊಂಡಿರಲಿಲ್ಲ?
6) ಲೈಫ್ ಬೋಟನ್ನು ಸ್ಪಾಟ್ ಸಮೀಪದಲ್ಲಿರಿಸದೇ, ದಡದಲ್ಲಿ ಯಾಕೆ ಇಟ್ಟುಕೊಂಡಿದ್ದಿರಿ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.