ತಿಮ್ಮಪ್ಪನಿಗೆ ಕೆಸಿಆರ್ ನಿಂದ 5 ಕೋಟಿ ಮೊತ್ತದ ಚಿನ್ನಾಭರಣ ಸಮರ್ಪಣೆ

Published : Feb 21, 2017, 10:39 AM ISTUpdated : Apr 11, 2018, 12:40 PM IST
ತಿಮ್ಮಪ್ಪನಿಗೆ ಕೆಸಿಆರ್ ನಿಂದ 5 ಕೋಟಿ ಮೊತ್ತದ ಚಿನ್ನಾಭರಣ ಸಮರ್ಪಣೆ

ಸಾರಾಂಶ

ತೆಲಂಗಾಣ ಮುಖ್ಯಮಂತ್ರಿ  ಚಂದ್ರಶೇಖರ್ ರಾವ್ ಕುಟುಂಬ ಸಮೇತ ನಾಳೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದು, 5.6 ಕೋಟಿ ರೂ. ಮೊತ್ತದ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ತಿಮ್ಮಪ್ಪನಿಗೆ ಸಮರ್ಪಿಸಲಿದ್ದಾರೆ.

ಹೈದರಾಬಾದ್ (ಫೆ.21): ತೆಲಂಗಾಣ ಮುಖ್ಯಮಂತ್ರಿ  ಚಂದ್ರಶೇಖರ್ ರಾವ್ ಕುಟುಂಬ ಸಮೇತ ನಾಳೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲಿದ್ದು, 5.6 ಕೋಟಿ ರೂ. ಮೊತ್ತದ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ತಿಮ್ಮಪ್ಪನಿಗೆ ಸಮರ್ಪಿಸಲಿದ್ದಾರೆ.

ತೆಲಂಗಾಣವನ್ನು ಪ್ರತ್ಯೇಕ ರಾಜ್ಯ ಮಾಡಬೇಕು ಎನ್ನುವ ಪ್ರಚಾರದ ಮುಂದಾಳತ್ವವನ್ನು ವಹಿಸಿಕೊಂಡಿದ್ದ ಚಂದ್ರಶೇಖರ್ ರಾವ್ , ತಮ್ಮ ಆಕಾಂಕ್ಷೆ ಈಡೇರಲಿ ಎಂದು ತಿರುಪತಿಗೆ ಹರಕೆ ಹೊತ್ತಿದ್ದರು. ಹಾಗಾಗಿ ಸಕುಟುಂಬ ಸಮೇತರಾಗಿ ಇಂದು ಸಂಜೆ ತಿರುಪತಿಗೆ ಪ್ರಯಾಣ ಬೆಳೆಸಲಿದ್ದು ನಾಳೆ ಹರಕೆ ಪೂಜೆ ಈಡೇರಿಸಲಿದ್ದಾರೆ. ಆಂಧ್ರ ಪ್ರದೇಶದಿಂದ ವಿಶೇಷ ವಿಮಾನದಲ್ಲಿ ತಿರುಪತಿಗೆ ತೆರಳಿದ್ದಾರೆ.

ಪದ್ಮಾವತಿಗೆ ಚಿನ್ನದ ಮೂಗುತಿಯನ್ನು ಸಮರ್ಪಿಸಲಿದ್ದಾರೆ. ಕುರವಿಯಲ್ಲಿರುವ ವೀರಭದ್ರಸ್ವಾಮಿ ದೇವಾಲಯಕ್ಕೆ ಈ ವಾರ ಶುದ್ಧ ಚಿನ್ನದ ಮೀಸೆಯನ್ನು ನೀಡಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!