
ಚಂಡೀಗಢ (ಜು. 10): ಪಂಜಾಬನ್ನು ಮಾದಕ ದ್ರವ್ಯ ಮುಕ್ತಗೊಳಿಸಲು ಪಣತೊಟ್ಟ ಸಿಎಂ ಅಮರೀಂದರ್ ನೇತೃತ್ವದ ಸರ್ಕಾರ, ಇದೀಗ ಯುವಕ ರನ್ನು ಮಾದಕ ವ್ಯಸನಿಗಳಾಗದಂತೆ ತಡೆಯಲು ಪ್ರತೀ ಗ್ರಾಮಕ್ಕೂ 5 ಲಕ್ಷ ರು. ಅನುದಾನ ನೀಡಲು ಮುಂದಾಗಿದೆ.
ಯಾವ ಗ್ರಾಮ ಮಾದಕದ್ರವ್ಯ ಸೇವನೆ ಮುಕ್ತವಾಗುತ್ತದೆಯೋ ಆ ಗ್ರಾಮಕ್ಕೆ ತಲಾ 5 ಲಕ್ಷ ರು. ವಿಶೇಷ ಅನುದಾನ ನೀಡಲಾಗುವುದು. ಈ ಹಣದಿಂದ ಜಿಮ್ ಮತ್ತು ಕ್ರೀಡೆಗೆ ಸಂಬಂಧಿಸಿದ ಪರಿಕರಗಳನ್ನು ಖರೀದಿಸಬಹುದು ಎಂದು ಪಂಜಾಬ್ನ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ತ್ರಿಪಾಠ್ ರಾಜೀಂದರ್ ಸಿಂಗ್ ಬಜ್ವಾ ಪ್ರಕಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.