
ಪುಣೆ[ಜು.4] ಪುಣೆಯ ವಿಶ್ವಶಾಂತಿ ಗುರುಕುಲ ವಿದ್ಯಾಲಯ ತನ್ನ ವಿದ್ಯಾರ್ಥಿನಿಯರು ತೊಡುವ ಒಳ ಉಡುಪು ಇಂಥದ್ದೆ ಬಣ್ಣದ್ದಾಗಿರಬೇಕು ಎಂದು ಹೇಳಿ ಎಡವಟ್ಟು ಮಾಡಿಕೊಂಡಿದೆ.
ವಿದ್ಯಾರ್ಥಿನಿಯರು ತೊಡುವ ಒಳ ಉಡುಪು ಬಿಳಿ ಅಥವಾ ಚರ್ಮದ ಬಣ್ಣದ್ದಾಗಿರಬೇಕು ಎಂಬ ಸೂಚನೆಯನ್ನು ಆಡಳಿತ ವರ್ಗ ಹೇಳಿದೆ. ತನ್ನ ಹೇಳಿಕೆಯನ್ನು ಹೊಸ ಶೈಕ್ಷಣಿಕ ವರ್ಷದ ಶಾಲಾ ಡೈರಿಯಲ್ಲಿ ಪ್ರಕಟಿಸಿದೆ.
ಶಾಲಾ ಡೈರಿಯಲ್ಲಿನ ಈ ನಿಬಂಧನೆಗೆ ಸಹಿ ಹಾಕಲು ಒತ್ತಾಯಿಸಲಾಗಿದೆ. ನಿಬಂಧನೆಗಳನ್ನು ಒಪ್ಪಿಕೊಳ್ಳಲೇಬೇಕು ಎಂದು ಆಡಳಿತ ಮಂಡಳಿ ಒತ್ತಾಯಿಸಿದ್ದಕ್ಕೆ ಪ್ರತಿಭಟನೆಯೂ ನಡೆದಿದೆ. ಅಲ್ಲದೇ ವಿದ್ಯಾರ್ಥಿನಿಯರು ನೀರು ಕುಡಿಯಲು ಜತೆಗೆ ಟಾಯ್ಲೆಟ್ ಗೆ ತೆರಳಲು ಸಮಯ ನಿಗದಿ ಮಾಡಿದ್ದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.(ಸಾಂದರ್ಭಿಕ ಚಿತ್ರ]
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.