
ಚಂಡೀಗಢ: ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಎನ್ನಲಾದ ನಿವೃತ್ತ ಯೋಧ ನರೇಶ್ ಎಂಬಾತ ಮಂಗಳವಾರ ಕೇವಲ 2 ಗಂಟೆ ಅವಧಿಯಲ್ಲಿ ಕಬ್ಬಿಣದ ರಾಡ್ನಿಂದ 6 ಜನರನ್ನು ಹತ್ಯೆಗೈದ ಭೀಕರ ಘಟನೆ ಹರ್ಯಾಣ ಪಲ್ವಾಲ್ನಲ್ಲಿ ನಡೆದಿದೆ.
ಏನಾಯ್ತು?: ಮಂಗಳವಾರ ಮಧ್ಯರಾತ್ರಿ ಖಾಸಗಿ ಆಸ್ಪತ್ರೆಯ ಸಹಾಯಕ ಸಿಬ್ಬಂದಿಯೊಬ್ಬನನ್ನು ಹತ್ಯೆಗೈದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸುವ ವೇಳೆ ಅದೇ ಆಸ್ಪತ್ರೆಯಲ್ಲಿ ಮಹಿಳಾ ಸಹಾಯಕಿ ಕೂಡಾ ಹತ್ಯೆಯಾಗಿದ್ದು ಕಂಡುಬಂತು. ಹೀಗಾಗಿ ಪೊಲೀಸರು ಆಸ್ಪತ್ರೆ ಸಿಸಿಟೀವಿ ದೃಶ್ಯಾವಳಿ ಪರಿಶೀಲಿಸಿ ದ ವೇಳೆ ವ್ಯಕ್ತಿಯೊಬ್ಬ ರಾಡ್ ಹಿಡಿದುಕೊಂಡು ತಿರುಗಾಡುತ್ತಿದ್ದ ದೃಶ್ಯ ಕಂಡುಬಂದಿತ್ತು.
ಆದರೆ ಆಸ್ಪತ್ರೆಯಲ್ಲಿ ಹುಡುಕಾಡಿದ ವೇಳೆ ಆತ ಪತ್ತೆಯಾಗಿರಲಿಲ್ಲ. ಆದರೆ ಈ ನಡುವೆ ಆಸ್ಪತ್ರೆಯಿಂದ ಪರಾರಿಯಾದ ನರೇಶ್, ರಸ್ತೆಯಲ್ಲಿ ಸಾಗುವ ವೇಳೆ ಎದುರಿಗೆ ಸಿಕ್ಕ ಅಂಜು, ಮುನ್ಷಿ ರಾಮ್, ಸೀತಾ ರಾಮ್, ಖೇಮ್ ಚಂದ್ ಹಾಗೂ ಇನ್ನೊಬ್ಬ ವ್ಯಕ್ತಿಯನ್ನು ಕೂಡಾ ಹತ್ಯೆ ಮಾಡಿದ್ದ. ಕೊನೆಗೆ 6 ಗಂಟೆ ವೇಳೆಗೆ ಅರೆಸ್ಟ್ ಆಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.