ಜಯಲಲಿತಾ ಬಿಟ್ಟು ಹೋದ ಆಸ್ತಿ ಎಷ್ಟು?

Published : Dec 05, 2016, 11:59 PM ISTUpdated : Apr 11, 2018, 12:39 PM IST
ಜಯಲಲಿತಾ ಬಿಟ್ಟು ಹೋದ ಆಸ್ತಿ ಎಷ್ಟು?

ಸಾರಾಂಶ

ಆಸ್ಪತ್ರೆ ಸೇರಿದ ತಮಿಳುನಾಡಿನ ಅಮ್ಮ , 74 ದಿನಗಳ ಸಾವು ಬದುಕಿನ ಹೋರಾಟ ಅಂತ್ಯವಾಗಿದೆ. ವರ್ಣರಂಜಿತ ರಾಜಕೀಯ ಬದುಕು ಮುಗಿಸಿದ ಜಯಾ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಪುರಚ್ಚಿ ತಲೈವಿಯ ಮೃತ್ಯುವಿನಿಂದ ಇಡೀ ತಮಿಳುನಾಡು ಶೋಕಸಾಗರದಲ್ಲಿ ಮುಳುಗಿದೆ. ಜಯಾ ಸಾವಿನ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ಆಟವೂ ಶುರುವಾಗಿದೆ. ವಿಧಿವಶರಾದ ಜಯಾ ಇದೀಗ ಬಿಟ್ಟು ಹೋದ ಆಸ್ತಿಯ ವಿವರ ಲಭ್ಯವಾಗಿದೆ. ಜಯಾ 2015 ರ ಏಪ್ರಿಲ್ ನಲ್ಲಿ ಘೋಷಿಸಿಕೊಂಡ ಪ್ರಕಾರ ಇವರು ಆಸ್ತಿ ವಿವರ.

ಚೆನ್ನೈ(ಡಿ.06): ಆಸ್ಪತ್ರೆ ಸೇರಿದ ತಮಿಳುನಾಡಿನ ಅಮ್ಮ , 74 ದಿನಗಳ ಸಾವು ಬದುಕಿನ ಹೋರಾಟ ಅಂತ್ಯವಾಗಿದೆ. ವರ್ಣರಂಜಿತ ರಾಜಕೀಯ ಬದುಕು ಮುಗಿಸಿದ ಜಯಾ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಪುರಚ್ಚಿ ತಲೈವಿಯ ಮೃತ್ಯುವಿನಿಂದ ಇಡೀ ತಮಿಳುನಾಡು ಶೋಕಸಾಗರದಲ್ಲಿ ಮುಳುಗಿದೆ. ಜಯಾ ಸಾವಿನ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ಆಟವೂ ಶುರುವಾಗಿದೆ.

ವಿಧಿವಶರಾದ ಜಯಾ ಇದೀಗ ಬಿಟ್ಟು ಹೋದ ಆಸ್ತಿಯ ವಿವರ ಲಭ್ಯವಾಗಿದೆ. ಜಯಾ 2015 ರ ಏಪ್ರಿಲ್ ನಲ್ಲಿ ಘೋಷಿಸಿಕೊಂಡ ಪ್ರಕಾರ ಇವರು ಆಸ್ತಿ ವಿವರ ಹೀಗಿದೆ.

ಚರಾಸ್ತಿ  - 41. 63 ಕೋಟಿ

ಸ್ಥಿರಾಸ್ತಿ - 72. 09 ಕೋಟಿ

41 ಸಾವಿರ ನಗದು, ಇತರೆ ಮೂಲಗಳಿಂದ 2. 04 ಕೋಟಿ

:

-ಐಟಿ ಕಂಪನಿಗಳಲ್ಲಿ 27.44 ಕೋಟಿ ಹೂಡಿಕೆ

-ಶ್ರೀ ಜಯಾ ಪಬ್ಲಿಕೇಷನ್, ಶಶಿ ಎಂಟರ್ ಪ್ರೈಸಸ್, ಕೊಡನಾಡ್ ಎಸ್ಟೇಟ್, ರಾಯಲ್ ವ್ಯಾಲಿ ಫ್ಲೋರಿಟೆಕ್, ಎಕ್ಸ್ ಪೋರ್ಟ್ಸ್, ಗ್ರೀನ್ ಟೀ ಎಸ್ಟೇಟ್ ಕಂಪನಿಗಳಲ್ಲಿ ಹೂಡಿಕೆ

-ಪೋಯಸ್ ಗಾರ್ಡನ್'ನಲ್ಲಿರುವ ವೇದ ನಿಲಯಂ ಜಯಲಲಿತಾ ನಿವಾಸ 24 ಸಾವಿರ ಚದರ ಅಡಿ ವಿಸ್ತಾರದ ಜಾಗದಲ್ಲಿ 21, 662 ಚದರ ಅಡಿ ಆಯದಲ್ಲಿ  ಇದೆ.

-ನಿವಾಸದ ಮೌಲ್ಯ - 43.96 ಕೋಟಿ, 1967ರಲ್ಲಿ ತಾಯಿಯೊಂದಿಗೆ 1.32 ಲಕ್ಷಕ್ಕೆ ಕೊಂಡುಕೊಂಡಿದ್ದರು.

-ತೆಲಂಗಾಣದ ರಂಗಾರೆಡ್ಡಿ ಜಿಲ್ಲೆ ಜೇಡಿಮಟ್ಟ ಗ್ರಾಮದಲ್ಲಿ 14.56 ಎಕರೆ ಕೃಷಿ ಭೂಮಿಯೂ ಇವರಲ್ಲಿತ್ತು ಇದನ್ನು 1968ರಲ್ಲಿ ತೆಲಂಗಾಣದ ಆಸ್ತಿ ಖರೀದಿಸಿದ್ದರು.

-1981ರಲ್ಲಿ ಚೆಯ್ಯೂರ್ ಗ್ರಾಮದ ಆಸ್ತಿಯನ್ನು ಖರೀದಿಸಿದ್ದರು.

-ಹೈದ್ರಾಬಾದ್ ನ 1 ಕಟ್ಟಡ ಸೇರಿದಂತೆ ನಾಲ್ಕು ವಾಣಿಜ್ಯ ಕಟ್ಟಡಗಳನ್ನು ಹೊಂದಿದ್ದರು.

ಜಯಲಲಿತಾ 2 ಟೋಯೋಟೋ ಕಾರುಗಳನ್ನು ಹೊಂದಿದ್ದರು, ಇದರ ಮೌಲ್ಯ ಬರೋಬ್ಬರಿ 40 ಲಕ್ಷ. ಜೊತೆಗೆ ಒಂದು ಟೆಂಪೋ ಟ್ರಾವೆಲರ್, ಟೆಂಪೋ ಟ್ಯಾಕ್ಸಿ, ಮಹೀಂದ್ರಾ ಜೀಪ್, 1980 ರ ಮಾಡೆಲ್ಲಿನ ಅಂಬಾಸಿಡರ್ ಕಾರು, ಒಂದು ಮಹೀಂದ್ರಾ ಬೊಲೆರೋ, ಸ್ವರಾಜ್ ಮಜ್ಡಾ ಮ್ಯಾಕ್ಸಿ, 1990ರ ಮಾಡೆಲ್ಲಿನ ಕಾಂಟೆಸಾ ಕಾರು ಹೊಂದಿದ್ದರು.

21. 280 ಗ್ರಾಂ ಚಿನ್ನಾಭರಣ

1250 ಕೆ.ಜಿ ಬೆಳ್ಳಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರಾವಳಿ ಉತ್ಸವ: ಹೆಲಿಕಾಪ್ಟರ್‌ನಲ್ಲಿ ಹಾರಾಡಿದ ವಿಶೇಷ ಚೇತನ ಮಕ್ಕಳು, ಸತೀಶ್ ಸೈಲ್ ಪುತ್ರಿಯ ಈ ಮಹತ್ಕಾರ್ಯಕ್ಕೆ ಜೈ ಎಂದ ಜನತೆ
ಸಚಿವ ಜಮೀರ್ ಆಪ್ತ ಸರ್ಫರಾಜ್ ಖಾನ್ ಮೇಲೆ ಲೋಕಾಯುಕ್ತ ದಾಳಿ: ಬಯಲಾಯ್ತು ಕೋಟಿ ಕೋಟಿ ಸಾಮ್ರಾಜ್ಯ!