ಗೌರಿ ಹಂತಕರ ಸೆರೆ: ಭಗವಾನ್ ಪ್ರತಿಕ್ರಿಯೆ ಏನು?

Published : Jun 12, 2018, 08:21 PM ISTUpdated : Jun 12, 2018, 08:27 PM IST
ಗೌರಿ ಹಂತಕರ ಸೆರೆ: ಭಗವಾನ್ ಪ್ರತಿಕ್ರಿಯೆ ಏನು?

ಸಾರಾಂಶ

ಗೌರಿ ಲಂಕೇಶ್ ಹಂತಕರ ಬಂಧನ ಹಿನ್ನೆಲೆ ರಾಜ್ಯ ಪೊಲೀಸ್ ಇಲಾಖೆಗೆ ಭಗವಾನ್ ಧನ್ಯವಾದ ಕರ್ನಾಟಕ ಪೊಲೀಸ್ ದೇಶಕ್ಕೆ ಮಾದರಿ ಎಂದ ಭಗವಾನ್ ಕಲಬುರ್ಗಿ ಹಂತಕರ ಬಂಧನದ ವಿಶ್ವಾಸ   

ಬೆಂಗಳೂರು[ಜೂ.12]: ಪತ್ರಕರ್ತೆ ಗೌರಿ ಲಂಕೇಶ್ ಹಂತಕರ ಬಂಧನ ಹಿನ್ನೆಲೆಯಲ್ಲಿ ಪ್ರೋ.ಕೆ.ಎಸ್. ಭಗವಾನ್ ಪ್ರತಿಕ್ರಿಯೆ ನೀಡಿದ್ದು, ಎಸ್.ಐ.ಟಿ ಪೊಲೀಸರನ್ನು ಅಭಿನಂದಿಸಿದ್ದಾರೆ. ಈ ಕುರಿತು ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯೆ ನೀಡಿರುವ ಭಗವಾನ್, ಕರ್ನಾಟಕ ಪೊಲೀಸ್ ದೇಶದಲ್ಲೇ ಮಾದರಿ ಪೊಲೀಸ್ ವ್ಯವಸ್ಥೆಯಾಗಿದೆ ಎಂದು ಹೊಗಳಿದ್ದಾರೆ. 

ಗೌರಿ ಹಂತಕರನ್ನು ಬಂಧಿಸುವ ಕುರಿತು ತಮಗೆ ವಿಶ್ವಾಸವಿತ್ತು. ಅದರಂತೆ ಇದೀಗ ಹಂತಕರ ಬಂಧನವಾಗಿದ್ದು, ಈ ಹಂತಕರ ಬೆನ್ನಿಗಿದ್ದ ಸಂಘಟನೆಗಳನ್ನು ನಾಶ ಮಾಡಿದರೆ ತಮಗೆ ಸಮಾಧಾನ ಸಿಗಲಿದೆ ಎಂದು ಭಗವಾನ್ ಹೇಳಿದ್ದಾರೆ.

ಇದೇ ವೇಳೆ ಗೌರಿ ಹಂತಕರಲ್ಲಿ ಒಬ್ಬನಾದ ಹೊಟ್ಟೆ ಮಂಜ ತಮ್ಮ ಮನೆಯ ಸುತ್ತುಮುತ್ತ ಹೆಚ್ಚು ತಿರುಗಾಡಿದ್ದು, ತಮಗೆ ಭದ್ರತೆ ಹೆಚ್ಚಿದ್ದ ಕಾರಣಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಭಗವಾನ್ ಹೇಳಿದ್ದಾರೆ. ತಮಗೆ ಭದ್ರತೆ ಒದಗಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿಯೂ ಭಗವಾನ್ ತಿಳಿಸಿದ್ದಾರೆ.

ಸದ್ಯ ಗೌರಿ ಹಂತಕರ ಬಂಧನವಾಗಿರುವುದರಿಂದ ದಾಬೋಲ್ಕರ್, ಪನ್ಸಾರೆ ಮತ್ತು ಪ್ರೋ.ಎಂ.ಎಂ ಕಲಬುರ್ಗಿ ಅವರ ಹಂತಕರ ಕುರಿತು ಸುಳಿವು ಸಿಗಬಹುದು ಎಂದು ಭಗವಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮರ್ಡರ್ ಕೇಸ್ ಟ್ರಯಲ್ ಶುರು.. ಡಿಜಿಪಿ ಅಲೋಕ್ ಬಳಿ ದರ್ಶನ್ ಹೇಳಿದ್ದೇನು? ಸೀಕ್ರೆಟ್ ಇಲ್ಲಿದೆ..
ಬುರ್ಖಾ ಹಾಕದೆ ಹೊರಗೆ ಹೋಗಿದ್ದಕ್ಕೆ ಪತ್ನಿ, ಇಬ್ಬರು ಹೆಣ್ಮಕ್ಕಳ ಕೊಂದ ಪಾಪಿ, ಮನೆಯ ಅಂಗಳದಲ್ಲಿ ಹೂತುಹಾಕಿದ!