ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೋವಿಂದ್: ಯಾರ್ಯಾರು ಏನೇನ್ ಹೇಳ್ತಾರೆ?

By Suvarna Web DeskFirst Published Jun 19, 2017, 5:41 PM IST
Highlights

ರಾಮ್ ನಾಥ್ ಕೋವಿಂದರನ್ನು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾರ್ಯಾರು ಏನೇನು ಹೇಳಿದ್ದಾರೆ ಇಲ್ಲಿದೆ ನೋಡಿ.

ನವದೆಹಲಿ (ಜೂ.19): ರಾಮ್ ನಾಥ್ ಕೋವಿಂದರನ್ನು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾರ್ಯಾರು ಏನೇನು ಹೇಳಿದ್ದಾರೆ ಇಲ್ಲಿದೆ ನೋಡಿ.

ರಾಮ್ ನಾಥ್ ಕೋವಿಂದ ಮಣ್ಣಿನ ಮಗ. ಸಾಧಾರಣ ಹಿನ್ನಲೆಯಿಂದ ಬಂದವರು. ಬಡವರಿಗೆ ಮತ್ತು ಕೆಳಹಂತದವರ ಅಭಿವೃದ್ಧಿಗಾಗಿ, ಸಾರ್ವಜನಿಕ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡಲಿದ್ದಾರೆ.

-ಪ್ರಧಾನಿ ನರೇಂದ್ರ ಮೋದಿ

 

Shri Ram Nath Kovind, a farmer's son, comes from a humble background. He devoted his life to public service & worked for poor & marginalised

— Narendra Modi (@narendramodi) June 19, 2017

 

* ರಾಮ್ ನಾಥ್ ಕೋವಿಂದ ನಾಯಕತ್ವದಲ್ಲಿ ಭಾರತ ಅಭಿವೃಧ್ದಿ ಸಾಧಿಸಲಿದೆ ಮತ್ತು ಹಿಂದುಳಿದ ವರ್ಗದವರು ನ್ಯಾಯವನ್ನು ಪಡೆಯಲಿದ್ದಾರೆ.

-ನಿತಿನ್ ಗಡ್ಕರಿ

* ರಾಜಕೀಯೇತರ ದಲಿತ ವ್ಯಕ್ತಿಗಳನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಎನ್'ಡಿಎ ಆಯ್ಕೆ ಮಾಡಬೇಕಿತ್ತು ಎಂಬುದು ನಮ್ಮ ಅಭಿಪ್ರಾಯ.

-ಮಾಯಾವತಿ

ಬಿಹಾರ ರಾಜ್ಯಪಾಲ ರಾಮ ನಾಥ್ ಕೋವಿಂದರನ್ನು ಆಯ್ಕೆ ಮಾಡಿರುವುದು ಸಂತೋಷದ ವಿಚಾರ. ಅವರನ್ನು ಶೀಘ್ರದಲ್ಲಿಯೇ ಭೇಟಿ ಮಾಡಿ ಅಭಿನಂದಿಸುತ್ತೇನೆ

-ನಿತೀಶ್ ಕುಮಾರ್

ದೇಶದಲ್ಲಿ ಇನ್ನು ಹಲವು ಒಳ್ಳೆಯ ನಾಯಕರಿದ್ದರು. ಇವರ ಬಗ್ಗೆ ನಮಗೆ ಗೊತ್ತೇ ಇಲ್ಲ

-ಮಮತಾ ಬ್ಯಾನರ್ಜಿ

* ಎನ್ ಡಿಎ ನಿರ್ಧಾರವನ್ನು ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ.

* ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ಧಾರವನ್ನು ನಾವು ಬೆಂಬಲಿಸುತ್ತೇವೆ.

-ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ಸಿಎಸ್ ರಾವ್

* ಎನ್ ಡಿಎ ಅಭ್ಯರ್ಥಿ ವಿರುದ್ಧ ನಾವು ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ

-ಸಿಪಿಎಂ

 

click me!