ಮಾಲಿನ್ಯದಿಂದ ಕಣ್ಣಿನ ರಕ್ಷಣೆ ಹೇಗೆ?

Published : Sep 12, 2016, 09:17 AM ISTUpdated : Apr 11, 2018, 12:44 PM IST
ಮಾಲಿನ್ಯದಿಂದ ಕಣ್ಣಿನ ರಕ್ಷಣೆ ಹೇಗೆ?

ಸಾರಾಂಶ

ವಾಯುಮಾಲಿನ್ಯದಿಂದ ಕಣ್ಣಿನ ಸೋಂಕು ಬೇಗ ಉಂಟಾಗುತ್ತದೆ.

ಹೆಚ್ಚುತ್ತಿರುವ ಮಾಲಿನ್ಯದಿಂದ ಆರೋಗ್ಯಕ್ಕೆ ಅಪಾಯ ಖಂಡಿತ, ಅದರಲ್ಲಿಯೂ ವಾಯುಮಾಲಿನ್ಯದಿಂದ ಕಣ್ಣಿನ ಸೋಂಕು ಬೇಗ ಉಂಟಾಗುತ್ತದೆ. ಕಣ್ಣಿನ ಸೋಂಕು ಉಂಟಾದಾಗ ಕಣ್ಣು ಕೆಂಪಾಗುವುದು, ಕಣ್ಣಿನಲ್ಲಿ ನೀರು ತುಂಬಿಕೊಳ್ಳುವುದು, ಕಣ್ಣಿನಲ್ಲಿ ತುರಿಕೆ ಕಾಣಿಸುತ್ತದೆ. ಈ ಸಮಯದಲ್ಲಿ ಸರಿಯಾದ ಚಿಕಿತ್ಸೆ ಮಾಡಿಕೊಳ್ಳದಿದ್ದರೆ ದೃಷ್ಟಿ ದೋಷ ಉಂಟಾಗುತ್ತದೆ. ಕಾರ್ನಿಯಾ ಸಮಸ್ಯೆಗಳು ಮತ್ತು ಕಣ್ಣಿನ ಅಲರ್ಜಿಯೂ ಉಂಟಾಗುತ್ತದೆ. ಕಣ್ಣಿನ ಸೋಂಕು ತಡೆಯಲು ಇಲ್ಲಿವೆ ಸಲಹೆಗಳು.

ಕಣ್ಣಿನಲ್ಲಿ ತುರಿಕೆ ಯಾಗುತ್ತಿದ್ದರೆ ಕಣ್ಣನ್ನು ಉಜ್ಜ ಬೇಡಿ. ಕಣ್ಣನ್ನು ತಂಪು ನೀರಿನಿಂದ ತೊಳೆಯಿರಿ. ಕಣ್ಣು ಉರಿ ಇದ್ದರೆ ಲೋಳೆಸರ ವನ್ನು ಲೇಪಿಸಿ ಅಥವಾ ಸೌತೆಕಾಯಿ ಚೂರುಗಳನ್ನು ಇಟ್ಟುಕೊಳ್ಳಿ. ಹೊರ ಹೋಗುವಾಗ ಬಿಸಿಲಿನ ಕನ್ನಡಕವನ್ನು ಧರಿಸಿ. ಕಣ್ಣುಗಳು ನೋಯುತ್ತಿದ್ದರೆ ಲೆನ್ಸ್ ಧರಿಸಿ. ಇಲ್ಲದಿದ್ದರೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರಲ್ಲಿ 200 ಮುಸ್ಲಿಮರ ಮನೆ ಧ್ವಂಸ : ಕೇರಳ ಸಿಎಂ ಕಿಡಿ
ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ