
ಬೆಂಗಳೂರು(ಸೆ. 10): ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಬಗ್ಗೆ ಪೊಲೀಸರು, ಸಾರ್ವಜನಿಕರಿಂದ ಮಾಹಿತಿ ಅಥವಾ ಸುಳಿವು ಕೊಟ್ರೆ 1 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಸರಕಾರ ಘೋಷಣೆಯನ್ನೇನೋ ಮಾಡಿತು. ಸಾರ್ವಜನಿಕರಿಂದ ಸಾಕಷ್ಟು ಕರೆಗಳು ಬರುತ್ತಿವೆ. ಆದರೆ, ಯಾವುದೂ ಕೂಡ ಕೇಸ್'ಗೆ ಸಹಾಯವಾಗದ ಮಾತುಗಳೇ. ಮಾಹಿತಿ ನೀಡುವ ಬದಲು ಜನರು ಬಿಟ್ಟಿ ಸಲಹೆ ಕೊಡುತ್ತಿದ್ದಾರಂತೆ. ತನಿಖೆ ಯಾವ ರೀತಿ ಮಾಡಬೇಕು ಎಂದು ಎಸ್'ಐಟಿ ಅಧಿಕಾರಿಗಳಿಗೆ ಜನರು ಪಾಠ ಹೇಳ್ತಿದ್ದಾರೆ.
ಇನ್ನು, ಪೊಲೀಸರೇ ಖುದ್ದಾಗಿ ಸಾರ್ವಜನಿಕರನ್ನು ಸಂಪರ್ಕಿಸಿ ಗೌರಿ ಹಂತಕರ ಸುಳಿವಿನ ಬಗ್ಗೆ ಪ್ರಶ್ನಿಸಿದ್ರೆ, ಕೆಲವರು ಕರೆಯನ್ನೇ ಕಟ್ ಮಾಡುತ್ತಿದ್ದಾರೆ. ಆದರೆ, ಕೆಲ ಸಾರ್ವಜಿನಿಕರು ತನಿಖೆಗೆ ಸ್ಪಂದನೆ ನೀಡುತ್ತಿದ್ದು, ಶನಿವಾರ ಒಂದೇ ದಿನ 55 ಜನರು ಪೊಲೀಸರ ತನಿಖೆ ಸ್ಪಂದಿಸಿದ್ದಾರೆ. ಹೆಚ್ಚಿನ ತನಿಖೆಗೆ ಸಹಕರಿಸಲು ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದು, 9480800202 ಸಂಖ್ಯೆಗೆ ಕರೆ ಮಾಡಿ ಅಥವಾ sit.glankesh@ksp.gov.in ಗೆ ಇ-ಮೇಲ್ ಮಾಡುವ ಮೂಲಕವಾದ್ರು ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.