ಬೆಂಗಳೂರಲ್ಲಿ ಶೂಟೌಟ್; ಚಾಕುವಿನಿಂದ ಹಲ್ಲೆ ಮಾಡಲು ಬಂದ ಗಾಂಜಾ ಮಾರಾಟಗಾರರ ಮೇಲೆ ಪೊಲೀಸ್ ಫೈರಿಂಗ್

Published : Jul 24, 2017, 07:29 AM ISTUpdated : Apr 11, 2018, 12:54 PM IST
ಬೆಂಗಳೂರಲ್ಲಿ ಶೂಟೌಟ್; ಚಾಕುವಿನಿಂದ ಹಲ್ಲೆ ಮಾಡಲು ಬಂದ ಗಾಂಜಾ ಮಾರಾಟಗಾರರ ಮೇಲೆ ಪೊಲೀಸ್ ಫೈರಿಂಗ್

ಸಾರಾಂಶ

ಪೊಲೀಸ್​​ ಪೇದೆ ಸಾಬರೆಡ್ಡಿಯ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ಮಾಡುತ್ತಾರೆ. ಆಗ ಇನ್ಸ್​'​ಪೆಕ್ಟರ್  ಸತ್ಯನಾರಾಯಣ ಆರೋಪಿಗಳ ಮೇಲೆ 5 ಸುತ್ತು ಗುಂಡು ಹಾರಿಸುತ್ತಾರೆ.

ಬೆಂಗಳೂರು(ಜುಲೈ 24): ಪೊಲೀಸ್​​ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾದ ಆರೋಪಿಗಳ ಮೇಲೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್​​ ಇನ್ಸ್'​​ಪೆಕ್ಟರ್ ಫೈರಿಂಗ್ ಮಾಡಿದ್ದಾರೆ.​​ ಬಳಿಕ ಆರೋಪಿಗಳನ್ನ ಬಂಧಿಸಿದ್ದಾರೆ. ಅಕ್ರಮ ಗಾಂಜಾ ಮಾರಾಟ ಸಂಬಂಧ ಆರೋಪಿಗಳನ್ನ ಬಂಧಿಸಲು ಹೋದಾಗ ಈ ಘಟನೆ ನಡೆದಿದೆ.

ಬ್ಯಾಡರಹಳ್ಳಿ ಪೊಲೀಸ್​​ ಇನ್ಸ್'​​ಪೆಕ್ಟರ್​​ ಸತ್ಯನಾರಾಯಣ ಅಂಡ್​​ ಟೀಂ, ನಿನ್ನೆ ಸಂಜೆ ಉಲ್ಲಾಳದ ವೆಂಕಟಪ್ಪ ಲೇಔಟ್'​ಗೆ ತೆರಳಿ ಅಕ್ರಮ ಗಾಂಜಾ ಮಾರಾಟಗಾರರನ್ನು ಹಿಡಿಯಲು ಯತ್ನಿಸಿದೆ. ಈ ವೇಳೆ ಪೊಲೀಸ್​​ ಪೇದೆ ಸಾಬರೆಡ್ಡಿಯ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ಮಾಡುತ್ತಾರೆ. ಆಗ ಇನ್ಸ್​'​ಪೆಕ್ಟರ್  ಸತ್ಯನಾರಾಯಣ ಆರೋಪಿಗಳ ಮೇಲೆ 5 ಸುತ್ತು ಗುಂಡು ಹಾರಿಸುತ್ತಾರೆ. ಬಳಿಕ, ಗಾಯಗೊಂಡ ಆರೋಪಿಗಳನ್ನ ಬಂಧಿಸುತ್ತಾರೆ. ಇದೇ ವೇಳೆ, ಘಟನೆಯಲ್ಲಿ ಗಾಯಗೊಂಡ ಪೇದೆ ಸಾಬರೆಡ್ಡಿ ಮತ್ತು ಆರೋಪಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!
ವಿಮಾನದ ಬಾಲಕ್ಕೆ ಪ್ಯಾರಾಚೂಟ್ ಸಿಲುಕಿ15,000 ಅಡಿ ಎತ್ತರದಲ್ಲಿ ನೇತಾಡಿದ ಸ್ಕೈಡೈವರ್ ಬದುಕುಳಿದಿದ್ದು ಹೇಗೆ? ವೀಡಿಯೋ