ನಕಲಿ ಇಮೇಲ್‌, ವೆಬ್‌ಸೈಟ್‌ ಸೃಷ್ಟಿಸಿ ವಂಚಿಸಿದ್ದವರ ಬಂಧನ

Published : Nov 16, 2016, 08:22 AM ISTUpdated : Apr 11, 2018, 12:49 PM IST
ನಕಲಿ ಇಮೇಲ್‌, ವೆಬ್‌ಸೈಟ್‌ ಸೃಷ್ಟಿಸಿ ವಂಚಿಸಿದ್ದವರ ಬಂಧನ

ಸಾರಾಂಶ

ಕಂಪನಿಗಳಿಗೆ ಕೋಟ್ಯಂತರ ರು. ನಷ್ಟಮಾಡುತ್ತಿದ್ದ ಆರೋಪಿಗಳು

ಬೆಂಗಳೂರು (ನ.16): ಪ್ರತಿಷ್ಠಿತ ಕಂಪನಿಗಳ ನಕಲಿ ಇ-ಮೇಲ್‌ ಐಡಿ ಹಾಗೂ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರುಪಾಯಿ ವಂಚಿಸುತ್ತಿದ್ದ ಇಬ್ಬರು ಆರೋಪಿ​ಗ​ಳ​ನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಜೈಪುರ ನಿವಾಸಿ ವಿವೇಕ್‌ (31) ಮತ್ತು ನವದೆಹಲಿಯ ಜಂಗ್‌ಪುರ ನಿವಾಸಿ ಸುಶಾಂತ (23) ಬಂಧಿತರು. ಆರೋಪಿಗಳು ದೆಹಲಿಯ ಮಾರ್ಕ್ಸ್ಕಾ್ಯನ್‌ ಡಾಟ್‌ ಕೋ. ಡಾಟ್‌ ಇನ್‌ ಎಂಬ ಕಂಪನಿಯಲ್ಲಿ ಕೆಲಸ ಮಾ​ಡು​ತ್ತಿ​ದ್ದರು. ಆ ಕಂಪನಿಯ ಮಾಲೀಕ, ನಿವೃತ್ತ ಐಪಿಎಸ್‌ ಅಧಿಕಾರಿ ಪುತ್ರ ಅಭಿಷೇಕ್‌ ಜತೆ ಸೇರಿ​ ಪ್ರತಿಷ್ಠಿತ ಕಂಪನಿಗಳ ನಕಲಿ ವೈಬ್‌ಸೈಟ್‌ ಹಾಗೂ ಇ-ಮೇಲ್‌ ಐಡಿಗಳನ್ನು ಸೃಷ್ಟಿಸಿ ಕಂಪನಿಗಳ ಷೇರು​ದಾರರಿಗೆ ನೋಟಿಸ್‌ ಹಾಗೂ ತಪ್ಪು ಸಂದೇಶ ನೀಡುತ್ತಿದ್ದರು. ಜತೆಗೆ ತಮ್ಮ ಕಂಪನಿ ಉತ್ತಮ​ವಾಗಿ ಕಾರ್ಯ ನಿರ್ವಹಿಸುತ್ತಿದೆ. ಕೋಟ್ಯಂತರ ರು. ಗಳಿಸಬಹುದು ಎಂದು ಆಕ​ರ್ಷಿ​ಸುತ್ತಿದ್ದರು. ಇದರಿಂದ ಇತರ ಕಂಪನಿಗಳಿಗೆ ಕೋಟ್ಯಂತರ ರು.ನಷ್ಟವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?: ಆರೋಪಿ ಸುಶಾಂತ 3 ವರ್ಷ​ಗಳ ಹಿಂದೆ ಬೆಂಗಳೂರಿನ ಐಪ್ಲೆಕ್ಸ್‌ ಡಾಟ್‌.ಆ್ಯಂಟಿ ಪೈರಸಿ ಕಂಪನಿಯಲ್ಲಿ ಕೆಲಸ ಮಾಡು​ತ್ತಿ​ದ್ದು, ಇತ್ತೀಚೆಗೆ ದೆಹಲಿಯ ಮಾರ್ಕ್ಸ್ಕಾ್ಯನ್‌ ಡಾಟ್‌ ಕೋ.ಡಾಟ್‌ ಇನ್‌ ಎಂಬ ಕಂಪನಿ ಸೇರಿದ್ದ. ಈ ವೇಳೆ ಮೊದಲ ಆರೋಪಿ ವಿವೇಕ್‌ ಪರಿ​ಚ​ಯ​ವಾಗಿದ್ದಾನೆ. ಕಂಪನಿಯ ಮಾಲೀಕ ಅಭಿಷೇಕ್‌ ಈ ಇಬ್ಬರು ಆರೋಪಿಗಳಿಗೆ ತಲಾ ರೂ.80 ಸಾವಿರ ಹಣದ ಆಸೆ ತೋರಿಸಿದ್ದಾನೆ. ಆಸೆಗೆ ಬಿದ್ದ ಆರೋಪಿ ಸುಶಾಂತ, ವಿವೇಕ್‌ ಜತೆ ಸೇರಿ ತನ್ನ ಹಿಂದಿನ ಕಂಪನಿಯ www.aiplex.com ವೆಬ್‌ಸೈಟ್‌ಅನ್ನು www.aiplex.us ಆಗಿ ಬದಲಾಯಿಸಿ ಕಂಪನಿಯ ಷೇರುದಾರರಿಗೆ ಇ-ಮೇಲ್‌ ಸಂದೇಶ ಕಳುಹಿಸಿ, ಬಳಿಕ ನೋಟಿಸ್‌ ನೀಡುತ್ತಿದ್ದರು. ಇದರಿಂದ ಗಾಬ​ರಿ​ಗೊಂಡು ಷೇರುದಾರರು ಕಂಪನಿ​ಯ​ಲ್ಲಿ​ರು​ವ ಷೇರುಗಳನ್ನು ವಾಪಸ್‌ ನೀಡುವಂತೆ ಒತ್ತಾಯ ಮಾಡುತ್ತಿದ್ದರು. ಇದರಿಂದ ಕಂಪನಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಈ ಸಂಬಂಧ ಐಪ್ಲೆಕ್ಸ್‌ ಕಂಪನಿ ಮಾಲೀಕರು ವಿಜಯ​ನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ಸೈಬರ್‌ ಕ್ರೈಂ ಸಿಬ್ಬಂದಿ ಸಹಾಯ ಪಡೆದು ಆರೋಪಿಗಳನ್ನು ರಾಜಸ್ಥಾನ, ದೆಹಲಿಯಲ್ಲಿ ಬಂಧಿಸಿದ್ದರು. ಅಲ್ಲದೆ, ಆರೋಪಿ​ಗ​ಳು ಸಾಮಾಜಿಕ ಜಾಲತಾಣಗಳಾದ ಯು​ಟ್ಯೂ​ಬ್‌, ಗೂಗಲ್‌, ಟ್ವಿಟರ್‌ಗಳ ಕೆಲ ವಿಡಿ​ಯೋ ಚಿತ್ರಣಗಳನ್ನು ನಿಷ್ಕ್ರಿಯಗೊಳಿಸುತ್ತಿದ್ದರು. ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಪ್ಪು ಹುಟ್ಟೋದಕ್ಕೂ ಮೊದಲು ವಿಷ್ಣುವರ್ಧನ್ ಜೊತೆ ಇಡೀ ರಾಜ್ಯ ಸುತ್ತಿದ್ರು ಶಿವರಾಜ್‌ಕುಮಾರ್.. ಇದು ನಿಜ!
ಹಾವೇರಿ ಆಸ್ಪತ್ರೆಯಲ್ಲಿ 'ನೀನು 8 ಸಾವಿರ ಸಂಬಳಕ್ಕೆ ಕೆಲಸ ಮಾಡುವ'ವನೆಂದು ನಿಂದಿಸಿದ ವೈದ್ಯ, ಮನನೊಂದು ವಿಷ ಕುಡಿದ ನೌಕರ