
ಬೆಂಗಳೂರು (ಫೆ.03): ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದು, ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ.
11 ಡಿಸಿಪಿ, 33 ಎಸಿಪಿ, 122 ಇನ್ಸ್ಪೆಕ್ಟರ್ ಗಳು, 700 ಕ್ಕೂ ಎಸ್'ಐ ಸೇರಿ 63,000 ಕ್ಕೂ ಹೆಚ್ಚು ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ. 50 ಕೆಎಸ್'ಆರ್'ಪಿ ತುಕಡಿ, 30 ಸಿಎಆರ್ ತುಕಡಿ ನಿಯೋಜಿಸಲಾಗಿದೆ. ಬಿಕೆ ಸಿಂಗ್ ಭದ್ರತೆಯ ಉಸ್ತುವಾರಿ ವಹಿಸಲಿದ್ದಾರೆ. ಸಂಚಾರಿ ಪೊಲೀಸರಿಂದಲೂ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು ಪೊಲೀಸರು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಸಂಚಾರ ಹೆಚ್ಚುವರಿ ಡಿಸಿಪಿ , 3 ಡಿಸಿಪಿ, 31 ಇನ್ಸ್ಪೆಕ್ಟರ್ ಸೇರಿ 1,000 ಕ್ಕೂ ಹೆಚ್ಚು ಪೊಲೀಸರಿಂದ ಸಂಚಾರಕ್ಕೆ ತೊಂದರೆ ಆಗದಂತೆ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಮಾವಿನಕಾಯಿ ಮಂಡಿ, ಪ್ಯಾಲೇಸ್ ಒಳಗೆ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಎಂದು ಕಮಿಷನರ್ ಸುನೀಲ್ ಕುಮಾರ್ ಹೇಳಿದ್ದಾರೆ.
ನಾವು ಯಾವುದೇ ಪ್ರತಿಭಟನೆಗಳನ್ನು ಸಮಾವೇಶಕ್ಕೆ ಬಿಡಲ್ಲ. ಪಕೋಡಾ ಮಾರಲು ನಮಗೆ ಯಾರು ಕೂಡ ಅನುಮತಿ ಕೇಳಿಲ್ಲ. 10 ದಿವಸದಿಂದ ಬಂದೋಬಸ್ತ್ ಬಗ್ಗೆ ನಿಗಾ ವಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ಎಲ್ಲಾ ನಡೆದಿದೆ. ಕೊಡಗುನಲ್ಲಿ ನಕ್ಸಲರು ಅಡಗಿರುವ ಹಿನ್ನೆಲೆಯಲ್ಲಿ ನಾವು ಗರುಡಾ ಫೋರ್ಸ್ ಅನ್ನು ಹೆಚ್ವುವರಿಯಾಗಿ ಭದ್ರತೆಗೆ ಬಳಸಿಕೊಂಡಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದ ರೀತಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.