
ನವದೆಹಲಿ (ಡಿ.08): ಕೇಂದ್ರ ಸರ್ಕಾರ ದೇಶಾದ್ಯಂತ ಸೃಷ್ಟಿ ಮಾಡಲು ಹೊರಟಿರುವ ನಗದು ರಹಿತ ಆರ್ಥಿಕತೆ ಬಗ್ಗೆ ಪರ ವಿರೋಧ ಚರ್ಚೆ ನಡೆಯುತ್ತಿರುವಾಗ ನರೇಂದ್ರ ಮೋದಿ ಇದಕ್ಕೆ ನಂದನ್ ನೀಲೇಕಣಿಯವರ ಸಹಾಯ ಯಾಚಿಸಿದ್ದಾರೆ.
ನಗದು ರಹಿತ ಆರ್ಥಿಕತೆಯನ್ನು ಉತ್ತೇಜಿಸಲು, ಅದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು ರಚಿಸಿರುವ ಸಮಿತಿಗೆ ವಿರೋಧ ಪಕ್ಷದ ಸದಸ್ಯ ನಂದನ್ ನೀಲೇಕಣಿ ಸೇರ್ಪಡೆಯಾಗಿದ್ದಾರೆ.
ನೀಲೆಕಣಿಯವರನ್ನು ಒಳಗೊಂಡ 13 ಜನರ ಸಮಿತಿಯಲ್ಲಿ ಡಿಜಿಟಲ್ ಪಾವತಿಯನ್ನು ಹೇಗೆ ಇನ್ನಷ್ಟು ಉತ್ತಮಪಡಿಸುವುದು, ಹೇಗೆ ಪರಿಣಾಮಕಾರಿ ಜಾರಿಗೊಳಿಸುವುದು ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ.
ವಿಪರ್ಯಾಸವೆಂದರೆ 350 ಮಿಲಿಯನ್ ಜನರ ಬಳಿ ಫೋನ್ ಇಲ್ಲ. ಹಾಗಿದ್ದಾಗ ಹೇಗೆ ಇದನ್ನು ಕಾರ್ಯರೂಪಕ್ಕಿಳಿಸುತ್ತಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.