
ಉತ್ತರಪ್ರದೇಶ (ನ.14): 500 ಹಾಗೂ 1000 ರೂ. ನೋಟುಗಳನ್ನು ರದ್ದುಗೊಳಿಸಿ ಕಾಳಧನಿಕರಿಗೆ ನೀಡಿದ ಆಘಾತವನ್ನು ಪ್ರಧಾನಿ ನರೇಂದ್ರ ಮೋದಿ 'ಖಡಕ್ ಚಾಯ್' ಗೆ ಹೋಲಿಸಿದ್ದಾರೆ.
ಉತ್ತರ ಪ್ರದೇಶದ ಬೃಹತ್ ರ್ಯಾಲಿನ್ನುದ್ದೇಶಿ ಮಾತನಾಡುತ್ತಾ, ತಾವು ಟೀ ಮಾರಾಟಗಾರರಾಗಿದ್ದಾಗಿನ ಬದುಕನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ನೋಟುಗಳ ರದ್ದು ವಿಚಾರವನ್ನು ಪ್ರಸ್ತಾಪಿಸಿ, ಈ ಆಘಾತವು ಕಪ್ಪುಹಣ ಹೊಂದಿದವರಿಗೆ 'ಖಡಕ್ ಚಾಯ್' ಇದ್ದಂತೆ ಎಂದು ವರ್ಣಿಸಿದ್ದಾರೆ.
ಭಾರತದ ಆರ್ಥಿಕತೆಯಲ್ಲಿ ಕಪ್ಪುಹಣವನ್ನು ಸಂಪೂರ್ಣವಾಗಿ ನಾಶಪಡಿಸಲು 50 ದಿನಗಳ ಕಾಲಾವಕಾಶ ಕೊಡಿ. ದೇಶದಲ್ಲಿ ಹಳೆ-ಹೊಸ ನೋಟುಗಳ ವಿನಿಮಯ ನಡೆಯುತ್ತಿದೆ. ಇದು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತಿದೆ. ಪ್ರಸ್ತುತ ಆಗುತ್ತಿರುವ ಅನಾನುಕೂಲತೆಯನ್ನು ಜನರು ಸಹಿಸಿಕೊಳ್ಳಬೇಕು ಎಂದು ರ್ಯಾಲಿಯಲ್ಲಿ ಮೋದಿ ವಿನಂತಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.