ರಾಷ್ಟ್ರಪತಿ ಬಾಡಿಗಾರ್ಡ್‌ ನೇಮಕದಲ್ಲೂ ‘ಜಾತಿ ರಾಜಕೀಯ’

Published : Dec 27, 2018, 11:23 AM IST
ರಾಷ್ಟ್ರಪತಿ ಬಾಡಿಗಾರ್ಡ್‌ ನೇಮಕದಲ್ಲೂ ‘ಜಾತಿ ರಾಜಕೀಯ’

ಸಾರಾಂಶ

ರಾಷ್ಟ್ರಪತಿ ಬಾಡಿಗಾರ್ಡ್‌ ನೇಮಕದಲ್ಲಿ ‘ಜಾತಿ ರಾಜಕೀಯ’:  ಹೈಕೋರ್ಟಲ್ಲಿ ದಾವೆ |  ಕೇವಲ 3 ಜಾತಿಗಳಿಗೆ ಪ್ರಾಧಾನ್ಯತೆ |  ನೇಮಕ ರದ್ದುಗೊಳಿಸುವಂತೆ ಅರ್ಜಿ |  ಕೇಂದ್ರ ಸರ್ಕಾರ, ಸೇನಾ ಮುಖ್ಯಸ್ಥರಿಗೆ ಕೋರ್ಟ್‌ ನೋಟಿಸ್‌  

ನವದೆಹಲಿ (ಡಿ. 27):  ರಾಷ್ಟ್ರಪತಿಗಳ ಅಂಗರಕ್ಷಕರಾಗಿ ಕೇವಲ ಮೂರು ಜಾತಿಯವರಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಕೇಂದ್ರ ಸರ್ಕಾರದ ವಿವಿಧ ಅಧಿಕಾರಿಗಳು, ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯ ಮುಖ್ಯಸ್ಥರು ಹಾಗೂ ಸೇನಾ ಮುಖ್ಯಸ್ಥರಿಗೆ ನೋಟಿಸ್‌ ಜಾರಿ ಮಾಡಿದೆ.

ಇದಕ್ಕೆ ಸಂಬಂಧಿಸಿದಂತೆ 4 ವಾರಗಳಲ್ಲಿ ಉತ್ತರ ನೀಡಬೇಕು ಎಂದೂ ಸೂಚಿಸಿರುವ ನ್ಯಾಯಪೀಠ, ಮೇ 8ಕ್ಕೆ ವಿಚಾರಣೆ ಮುಂದೂಡಿದೆ.

ಜಾಟ್‌, ರಜಪೂತ ಹಾಗೂ ಜಾಟ್‌ ಸಿಖ್ಖರಿಗೆ ಮಾತ್ರ ರಾಷ್ಟ್ರಪತಿಗಳ ಅಂಗರಕ್ಷಕ ಹುದ್ದೆ ನೀಡಲಾಗಿದ್ದು, ಈ ಸಂಬಂಧ 2017ರ ಸೆ.4ರಂದು ನಡೆದ ನೇಮಕಾತಿಗಳನ್ನು ರದ್ದು ಮಾಡಬೇಕು ಎಂದು ಹರ್ಯಾಣದ ಗೌರವ್‌ ಯಾದವ್‌ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ತಾನು ಯಾದವ್‌/ಅಹಿರ್‌ ಸಮುದಾಯಕ್ಕೆ ಸೇರಿದ್ದು ಅಂಗರಕ್ಷಕನಾಗುವ ಸಕಲ ಅರ್ಹತೆ ಹೊಂದಿದ್ದೇನೆ. ಆದರೆ ಕೇವಲ ಈ ಮೇಲಿನ 3 ಜಾತಿಯವರಿಗೆ ಮಾತ್ರ ನೇಮಕದಲ್ಲಿ ಪ್ರಾಧಾನ್ಯತೆ ನೀಡಲಾಗಿದೆ ಎಂದು ಅವರು ದೂರಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ