
ಬೆಂಗಳೂರು(ಜೂನ್ 15): ನಿತ್ಯ ಪೆಟ್ರೋಲ್. ಡೀಸೆಲ್ ಬೆಲೆ ಪರಿಷ್ಕರಣೆ ಯೋಜನೆ ಜಾರಿಯನ್ನು ವಿರೋಧಿಸಿ ಪೆಟ್ರೋಲ್ ಬಂಕ್ ಡೀಲರ್'ಗಳು ನಾಳೆ ಒಂದು ದಿನ ಖರೀದಿ ಮಾಡದಿರಲು ನಿರ್ಧರಿಸಿದೆ. ಬೆಂಗಳೂರಿನ ಪೆಟ್ರೋಲ್ ಬಂಕ್ ಡೀಲರ್'ಗಳು ನಾಳೆ ಪೆಟ್ರೋಲ್ ಖರೀದಿ ಮಾಡುವುದಿಲ್ಲ. ತಮ್ಮಲ್ಲಿ ಸಂಗ್ರಹವಾಗಿರುವಷ್ಟು ತೈಲವನ್ನು ಮಾತ್ರ ಗ್ರಾಹಕರಿಗೆ ಮಾರಾಟ ಮಾಡಲಿವೆ. ಕೇಂದ್ರ ಸರ್ಕಾರದ ಜತೆಗಿನ ಮುಂದಿನ ಸುತ್ತಿನ ಮಾತುಕತೆಯ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ.
ಇನ್ನು ಪೆಟ್ರೋಲ್ ಖರೀದಿ ಹಾಗೂ ಬಂಕ್ ತೆರೆಯುವುದು ಅಯಾ ಬಂಕ್ ಡೀಲರ್'ಗಳ ವಿವೇಚನೆಗೆ ಬೀಡಲಾಗಿದೆ. ಮಧ್ಯರಾತ್ರಿ ಹೊಸ ದರಗಳನ್ನು ನಿಗದಿಪಡಿಸಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಡೀಲರ್'ಗಳು ಆಕ್ಷೇಪಿಸಿವೆ.ಈ ನಿಯಮ ಜಾರಿಯಿಂದ ಪೆಟ್ರೋಲ್ ಪಂಪ್'ಗಳಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕಾಗುತ್ತದೆ ಎಂಬುದು ಡೀಲರ್'ಗಳ ಆಕ್ಷೇಪವಾಗಿದೆ.
ಒಂದು ದಿನದ ಮಟ್ಟಿಗೆ ಪೆಟ್ರೋಲ್ ಖರೀದಿಯೂ ಇಲ್ಲ, ಪೆಟ್ರೋಲ್ ಮಾರಾಟವೂ ಇಲ್ಲ ಎಂದು ಪೆಟ್ರೋಲ್ ಡೀಲರ್'ಗಳು ನಿನ್ನೆಯವರೆಗೂ ಹೇಳಿಕೊಂಡು ಬಂದಿದ್ದರು. ಇದೀಗ, ಪೆಟ್ರೋಲ್ ಸ್ಟಾಕ್ ಇರುವವರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.