ಸಾಧನೆಗೆ ಅಂಕಗಳು ಮುಖ್ಯವಲ್ಲ ಎಂಬುವುದನ್ನು ತೋರಿಸಿಕೊಟ್ಟ ಜಗತ್ತಿನ ಮಹಾನ್ ವ್ಯಕ್ತಿಗಳು

Published : May 10, 2017, 01:46 AM ISTUpdated : Apr 11, 2018, 12:34 PM IST
ಸಾಧನೆಗೆ ಅಂಕಗಳು ಮುಖ್ಯವಲ್ಲ ಎಂಬುವುದನ್ನು ತೋರಿಸಿಕೊಟ್ಟ ಜಗತ್ತಿನ ಮಹಾನ್ ವ್ಯಕ್ತಿಗಳು

ಸಾರಾಂಶ

ಔಪಚಾರಿಕ ಪದವಿಗಳನ್ನು ಪಡೆಯದೇ ಅಥವಾ ಅರ್ಧದಲ್ಲೇ ಶಾಲಾ ಶಿಕ್ಷಣ ಮೊಟಕುಗೊಳಿಸಿ ಜೀವನದಲ್ಲಿ ಸಾಧನೆಗೈದವರಿದ್ದಾರೆ. ಅವರ ಸಾಧನೆಗೆ ಜಗತ್ತೇ ತಲೆಬಾಗಿದೆ. ಅವರ ಪೈಕಿ ಕೆಲವು ಉದಾಹರಣೆಗಳು ಇಲ್ಲಿವೆ.

  • ಐನ್’ಸ್ಟೀನ್ : ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಅಲ್ಪರ್ಟ್ ಐನ್’ಸ್ಟೀನ್ ಒಬ್ಬರು. ತನ್ನ ಜೀವಮಾನದಲ್ಲಿ 300ಕ್ಕಿಂತಲೂ ಹೆಚ್ಚು ವೈಜ್ಞಾನಿಕ ಸಿದ್ಧಾಂತಗಳನ್ನು ಮಂಡಿಸಿದ, e=mc2, ಹಾಗೂ ಸಾಪೇಕ್ಷತವಾದವನ್ನು ವಿವರಿಸಿ ನೋಬೆಲ್ ಪ್ರಶಸ್ತಿಯನ್ನು ಪಡೆದ ಐನ್’ಸ್ಟೀನ್ ಅರ್ಧದಲ್ಲೇ ಶಾಲಾ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದವರು. ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ಅರ್ಹತಾ ಪರೀಕ್ಷೆಗಳನ್ನು ಬರೆದರಾದರೂ ಆರಂಭದಲ್ಲಿ ಅವರಿಗೆ ಅವುಗಳಲ್ಲಿ ಪಾಸಾಗಲಿಕ್ಕೆ ಸಾಧ್ಯವಾಗಿರಲಿಲ್ಲ.
  • ಲಿಂಕನ್ ಹೆಸರನ್ನು ಕೇಳದವರಾರಿದ್ದಾರೆ.  ಅಮೆರಿಕಾ ಕಂಡ ಅತೀ ಜನಪ್ರಿಯ ಅಧ್ಯಕ್ಷರಲ್ಲಿ ಲಿಂಕನ್ ಒಬ್ಬರು. ಅಮೆರಿಕಾವನ್ನು ಸಂಕಷ್ಟದ ಸಮಯದಲ್ಲಿ ಸಮರ್ಥವಾಗಿ ಮುನ್ನಡೆಸಿದ ಲಿಂಕನ್, ದೇಶದಲ್ಲಿ ಗುಲಾಮಗಿರಿ ವ್ಯವಸ್ಥೆಗೆ ಅಂತ್ಯ ಹಾಡಿದ ಲಿಂಕನ್ ಭಾರೀ ದೊಡ್ಡ ಪದವಿಗಳನ್ನು ಪಡೆವರಾಗಿರಲಿಲ್ಲ.
  • ಶೇಕ್ಸ್’ಪಿಯರ್ : ಸಾಹಿತ್ಯಲೋಕದ ಸಾಮ್ರಾಟ ವಿಲಿಯಮ್ ಶೇಕ್ಸ್’ಪಿಯರ್ ತನ್ನ 13ನೇ ವಯಸ್ಸಿನಲ್ಲಿ ಶಾಲಾ ವಿದ್ಯಾಭ್ಯಾಸ ತೊರೆದವರು. ಅದಾಗ್ಯೂ 1700 ಪದಗಳನ್ನು ಅವರು ಅವಿಷ್ಕರಿಸಿದ್ದಾರೆ.
  • ಹೆನ್ರಿ ಫೋರ್ಡ್: ಜಗತ್ತಿನ  ಅಟೋಮೊಬೈಲ್ ಕೈಗಾರಿಕೆಯಲ್ಲಿ ಹೆನ್ರಿ ಫೋರ್ಡ್ ಕೊಡುಗೆ ಅಪಾರ. ಸಣ್ಣ ರೈತನ ಮಗನಾಗಿ, ಅಟೋಮೊಬೈಲ್ ಕೈಗಾರಿಕಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಫೋರ್ಡ್ ಹೆಚ್ಚಿನ ಶಿಕ್ಷಣ ಪಡೆಯಲಿಲ್ಲ,
  • ಜಾಬ್ಸ್: ಆ್ಯಪಲ್ ಕಂಪನಿಯ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಕೇವಲ ಶಾಲಾ ಶಿಕ್ಷಣವನ್ನು ಪೂರೈಸಿ, ಕೇವಲ ಆರು ತಿಂಗಳು ಕಾಲೇಜು ಹೋಗಿದ್ದಾರೆ.  ಜಗತ್ತನ್ನೇ ವಿಸ್ಮಿತಗೊಳಿಸುವ ಐ-ಪ್ಯಾಡ್, ಐ-ಫೋನ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದವರು ಇದೇ ಸ್ಟೀವ್ ಜಾಬ್ಸ್.
  • ಥಾಮಸ್ ಅಲ್ವಾ ಎಡಿಸನ್, ಪಿಕಾಸೋ, ಬಿಲ್ ಗೇಟ್ಸ್.....ಈ ರೀತಿ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಳೆ ಬೆಂಗಳೂರಿನಲ್ಲಿ ವಿದ್ಯುತ್ ಕಡಿತ: ನಿಮ್ಮ ಏರಿಯಾ ಇದೆಯಾ ಚೆಕ್ ಮಾಡಿ?
ದೇವಸ್ಥಾನದ ಕಾರ್ತಿಕ ದೀಪದ ಪರವಾಗಿ ತೀರ್ಪು ನೀಡಿದ ಜಡ್ಜ್‌, ಸೇಡು ತೀರಿಸಿಕೊಳ್ಳಲು ಮುಂದಾದ ತಮಿಳುನಾಡು ಸರ್ಕಾರ!