
ನವದೆಹಲಿ[ಜೂ. 05] ಕಳೆದ 5 ವರ್ಷದಲ್ಲಿ ಭಾರತದ ಸ್ಥಾನಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬದಲಾಗಿರುವುದನ್ನು ಭಾರತದ ಬಹುಪಾಲು ಜನರು ಗಮನಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಚೀನಾ ವೇಗವಾಗಿ ಬೆಳೆಯುತ್ತಿದೆ ಅದರೊಂದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗ್ಲೋಬಲ್ ರಿಬ್ಯಾಲೆಂಸ್ಸಿಂಗ್ ಆಗುತ್ತಿದೆ. ಜತೆಗೆ ಭಾರತ ಸಹ ತನ್ನಸ್ಥಾನ ಬದಲಾಯಿಸಿಕೊಂಡಿದೆ ಎಂದರು.
ನವದೆಹಲಿಯ ಸೆಮಿನಾರ್ ಒಂದರಲ್ಲಿ ಮಾತನಾಡಿದ ಸಚಿವರು, ಕೇಂದ್ರ ಸರಕಾರ ಕಳೆದ 5 ವರ್ಷಗಳಿಂದ ದೇಶದ ಹೊರಗೆ ಮತ್ತು ಒಳಗೆ ನಿಂತು ಯೋಜನೆಗಳನ್ನು ರೂಪಿಸುತ್ತಿದೆ. ಪ್ರದೇಶ ಆರ್ಥಿಕಾಭಿವೃದ್ಧಿ ಮತ್ತು ಅತ್ಯುತ್ತಮ ವಿದೇಶಾಂಗ ನೀತಿಗೆ ಆದ್ಯತೆ ನೀಡಿಕೊಂಡೇ ಬಂದಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.