
ದೇವೋರಿಯಾ(ಸೆ. 06): ರಾಹುಲ್ ಗಾಂಧಿ ಭಾಷಣ ಕೇಳಲು ಬಂದ ಜನರು ಸ್ಥಳದಲ್ಲಿದ್ದ ನೂರಾರು ಮಂಚಗಳನ್ನ ಮನೆಗೆ ಎತ್ತಿ ಒಯ್ದ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ವಿನೂತನ ರೀತಿಯಲ್ಲಿ ನಡೆಸಲಾಗುತ್ತಿರುವ ರೈತರ ಸಭೆಯಲ್ಲಿ ಇಡಲಾಗಿದ್ದ 2 ಸಾವಿರ ಮಂಚಗಳ ಪೈಕಿ ಉಳಿದುಕೊಂಡಿದ್ದು ಹತ್ತಾರು ಮಾತ್ರ.
ಏನಿದು ರೈತರ ಸಭೆ?
ಖಾಟ್ ಸಭಾ(ರೈತರ ಸಭೆ)ದಲ್ಲಿ ಮಂಚಗಳ ಮೇಲೆ ಕುಳಿತು ರೈತರು ಪ್ರಮುಖ ವಿಷಯಗಳನ್ನು ಚರ್ಚಿಸುತ್ತಾರೆ. ಮೋದಿಯವರ ಚಾಯ್ ಪೇ ಚರ್ಚಾ ಕಾರ್ಯಕ್ರಮಕ್ಕೆ ಸೆಡ್ಡು ಹೊಡೆಯಲು ರಾಹುಲ್ ಗಾಂಧಿ ಅನುಸರಿಸುತ್ತಿರುವ ಹೊಸ ತಂತ್ರ ಇದಾಗಿದೆ. ಆದರೆ, ಗಂಭೀರ ವಿಷಯದ ಚರ್ಚೆಗೆ ಬಂದ ಜನರು ಹೊಚ್ಚಹೊಸ ಮಂಚಗಳನ್ನ ಮನೆಗೆ ಹೊತ್ತೊಯ್ದಿದ್ದಾರೆ. ಭಾರೀ ಭಾರದ ಕಬ್ಬಿಣದ ಮಂಚಗಳಷ್ಟೇ ಉಳಿದುಕೊಂಡಿದ್ದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.