ಥೂ..ಥೂ: ಕುವೈತ್ ರಾಯಭಾರಿ ಪರ್ಸ್ ಕದ್ದ ಪಾಕ್ ಅಧಿಕಾರಿ!

Published : Sep 30, 2018, 12:34 PM ISTUpdated : Sep 30, 2018, 05:53 PM IST
ಥೂ..ಥೂ: ಕುವೈತ್ ರಾಯಭಾರಿ ಪರ್ಸ್ ಕದ್ದ ಪಾಕ್ ಅಧಿಕಾರಿ!

ಸಾರಾಂಶ

ಶೇಮ್ ಶೇಮ್ ಪಾಕಿಸ್ತಾನ..ಥೂ ನಾಚಿಕೆಗೇಡು! ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಕ್ ಅಧಿಕಾರಿ ಎಡವಟ್ಟು! ಕುವೈತ್ ಅಧಿಕಾರಿ ಪರ್ಸ್ ಕದ್ದ ಪಾಕಿಸ್ತಾನ ಅಧಿಕಾರಿ! ಪರ್ಸ್ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ! ಕುವೈತ್ ಅಧಿಕಾರಿ ಪರ್ಸ್ ಕದ್ದ ಜರಾರ್ ಹೈದರ್ ಖಾನ್  

ಇಸ್ಲಾಮಾಬಾದ್(ಸೆ.30): ಪಾಕಿಸ್ತಾನ ಜಾಗತಿಕವಾಗಿ ಲೇವಡಿಗೆ ಒಳಪಡುವಷ್ಟು ಜಗತ್ತಿನ ಇನ್ಯಾವುದೇ ರಾಷ್ಟ್ರ ಗುರಿಯಾಗುವುದಿಲ್ಲ. ಪಾಕ್ ಮಾಡುವ ಕೆಲಸವೇ ಅಂತದ್ದು. ಒಂದೆಡೆ ವಿಶ್ವದ ಭೂಪಟದಲ್ಲಿ ತನಗೆ ಅತೀ ಪ್ರಮುಖ ಸ್ಥಾನವಿದೆ ಎಂಬ ಭ್ರಮೆಯಲ್ಲಿರುವ ಪಾಕ್, ಮತ್ತೊಂದೆಡೆ ತಾನು ಮಾಡಿಕೊಳ್ಳುವ ಯಡವಟ್ಟಿನಿಂದ ವಿಶ್ವದ ಮುಂದೆ ನಗೆಪಾಟಲಿಗೆ ಈಡಾಗುತ್ತಿದೆ.

ಜಂಟಿ ಸಚಿವರ ಸಮಿತಿ ಸಭೆಯಲ್ಲಿ ಪಾಕಿಸ್ತಾನ ಅಧಿಕಾರಿಯೊಬ್ಬರು ಕುವೈತ್ ಅಧಿಕಾರಿಯ ಪರ್ಸ್ ಕದಿದ್ದು, ಪಾಕಿಸ್ತಾನ ಜಾಗತಿಕವಾಗಿ ತೀವ್ರ ಮುಜುಗರ ಎದುರಿಸುವಂತಾಗಿದೆ. ಪಾಕ್ ಅಧಿಕಾರಿಯೋರ್ವ ಕುವೈತ್ ಅಧಿಕಾರಿಯ ಪರ್ಸ್ ಕದಿಯುತ್ತಿರುವ ದೃಶ್ಯಗಳು ಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಾಕಿಸ್ತಾನದ ಅಧಿಕಾರಿ ಜರಾರ್ ಹೈದರ್ ಖಾನ್, ಕುವೈತ್ ಅಧಿಕಾರಯ ಪರ್ಸ್ ಕದಿದಿದ್ದಾರೆ. ಜರಾರ್ ಪಾಕಿಸ್ತಾನದ ಗ್ರೇಡ್ 20 ಜಿಒಪಿ ಅಧಿಕಾರಿ. ತಮ್ಮ ಪರ್ಸ್ ಕಳೆದು ಹೋಗಿರುವುದಾಗಿ ಕುವೈತ್ ಅಧಿಕಾರಿ ದೂರು ನೀಡಿದ ಹಿನ್ನೆಲೆಯಲ್ಲಿ ಹಾಲ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕ್ ಹಣಕಾಸು ಸಚಿವರು ಬೇಸರ ವ್ಯಕ್ತಪಡಿಸಿದ್ದು, ಕೂಡಲೇ ಅಧಿಕಾರಿಯನ್ನು ಬಂಧಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ ಬಾಗಲಕೋಟೆ ಉಪಚುನಾವಣ ಫಲಿತಾಂಶದ ನಡುವೆಯೇ ಮಹತ್ವದ ಬೆಳವಣಿಗೆ; ಮುಂದಿನ ಸಿಎಂ ಖರ್ಗೆ? ರಾಯರಡ್ಡಿ ಹೇಳಿದ್ದೇನು?
ಕೈ ಪಾಳಯದಲ್ಲೀಗ ಉಪಸಮರ ಲಾಭ, ನಷ್ಟದ ಲೆಕ್ಕಾಚಾರ ಶುರು - ಸಿದ್ದುಗೆ ಬಾಗಲಕೋಟೆ, ಡಿಕೆಶಿಗೆ ದಾವಣಗೆರೆ ಮಹತ್ವದ್ದು ಯಾಕೆ ಗೊತ್ತಾ?