
ಇಸ್ಲಾಮಾಬಾದ್: ‘ಮೈಸೂರು ಹುಲಿ’ ಖ್ಯಾತಿಯ ಟಿಪ್ಪು ಸುಲ್ತಾನ್ ಅವರ 218 ನೇ ಪುಣ್ಯತಿಥಿಯನ್ನು ಪಾಕಿಸ್ತಾನದಲ್ಲಿ ಶುಕ್ರವಾರ ಆಚರಿಸಲಾಯಿತು. ಈ ಬಗ್ಗೆ ಚಿತ್ರ ಸಮೇತ ಟ್ವೀಟ್ ಮಾಡಿರುವ ಪಾಕಿಸ್ತಾನ ಸರ್ಕಾರ, ‘ಮೈಸೂರು ಹುಲಿ ಟಿಪ್ಪು ಸುಲ್ತಾನರನ್ನು ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಸ್ಮರಿಸುತ್ತಿದ್ದೇವೆ. ತಮ್ಮ ಚಿಕ್ಕ ವಯಸ್ಸಿನಲ್ಲೇ ಟಿಪ್ಪು ಅವರು ಯುದ್ಧಕಲೆಯಲ್ಲಿ ತರಬೇತಿ ಪಡೆದರು ಹಾಗೂ ಕಲಿಯುವ ತುಡಿತ ಹೊಂದಿದ್ದರು’ ಎಂದು ಬಣ್ಣಿಸಿದೆ.
‘ಟಿಪ್ಪು ಸುಲ್ತಾನ್ ಅವರು ಹೈದರ್ ಅಲಿ ಅವರ ಜ್ಯೇಷ್ಠ ಪುತ್ರ. ಮೈಸೂರು ಸಾಮ್ರಾಜ್ಯವು ಉತ್ತುಂಗಕ್ಕೇ ರಿದ್ದು ಟಿಪ್ಪು ಸುಲ್ತಾನ್ ಅವಧಿಯಲ್ಲಿ’ ಎಂದು ಪಾಕ್ ಸರ್ಕಾರ ಟ್ವೀಟ್ನಲ್ಲಿ ಪ್ರಶಂಸಿಸಿದೆ. ಇನ್ನು ಟಿಪ್ಪುವಿನ ಕೊಡುಗೆಗಳನ್ನು ಪಟ್ಟಿ ಮಾಡಿರುವ ಪಾಕ್ ಸರ್ಕಾರ, ‘ಟಿಪ್ಪು ಅವಧಿಯಲ್ಲಿ ಹೊಸ ನಾಣ್ಯಟಂಕಿಸಲಾಯಿತು. ಮೌಲುದಿ ಚಾಂದ್ರಮಾನ ಪಂಚಾಂಗ ಅಳವಡಿಸಲಾ ಯಿತು. ಭೂಕಂದಾಯ ವ್ಯವಸ್ಥೆ ಜಾರಿಗೆ ತಂದರು ಹಾಗೂ ರೇಷ್ಮೆ ಕೃಷಿ ಪ್ರೋತ್ಸಾಹಿಸಿದರು’ ಎಂದು ಹೊಗಳಿದೆ.
ರೇಡಿಯೋ ಸ್ಮರಣೆ: ‘ಮೈ ಸೂರಿನ ಮುಸ್ಲಿಂ ಅರಸ ಬಾದ್ಶಾ ನಸೀಬುದುಲ್ಲಾ ಸುಲ್ತಾನ್ ಫತೇ ಅಲಿ ಬಹಾ ದೂರ್ ಸಾಹಬ್ ಟಿಪ್ಪು ಅಲಿಯಾಸ್ ಟಿಪ್ಪು ಸುಲ್ತಾನರ ಪುಣ್ಯತಿಥಿಯನ್ನು ಶುಕ್ರವಾರ ಆಚರಿ ಸಲಾಯಿತು’ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ. ಇದೇ ವೇಳೆ ಟಿಪ್ಪುವನ್ನು ಪ್ರಶಂಸಿ ಸಿರುವ ಅದು, ‘ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಅವರು ಹೋರಾಡಿತು. ಅವರೊಬ್ಬ ಉತ್ತಮ ಆಡಳಿತಗಾರ, ಯೋಧ’ ಎಂದು ಬಣ್ಣಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.