ಹಿಂದೂಗಳು ನಮ್ಮ ಶತ್ರುಗಳು ಎಂದು ಕ್ಷಮಿಸಿ ಎಂದ ಪಾಕ್ ಸಚಿವ!

Published : Mar 20, 2019, 07:15 PM IST
ಹಿಂದೂಗಳು ನಮ್ಮ ಶತ್ರುಗಳು ಎಂದು ಕ್ಷಮಿಸಿ ಎಂದ ಪಾಕ್ ಸಚಿವ!

ಸಾರಾಂಶ

ಪಾಕಿಸ್ತಾನದ ಶತ್ರುಗಳು ಹಿಂದೂಗಳೆಂದ ಪಾಕಿಸ್ತಾನ ಸಚಿವ| ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಶೇರ್ ಆಜಂ ವಾಜೀರ್ ಹೇಳಿಕೆ| ವಾಜೀರ್ ಹೇಳಿಕೆ ಖಂಡಿಸಿ ಪ್ರಾಂತೀಯ ವಿಧಾನಸಭೆಯಿಂದ ಹೊರನಡೆದ ಅಲ್ಪಸಂಖ್ಯಾತ ಪ್ರತಿನಿಧಿಗಳು| ರವಿ ಕುಮಾರ್, ರಂಜೀತ್ ಸಿಂಗ್ ಅವರಿಂದ ಸಭಾತ್ಯಾಗ| ತಮ್ಮ ಹೇಳಿಕೆಗೆ ಕ್ಷಮೆ ಕೋರಿದ ಶೇರ್ ಆಜಂ ವಾಜೀರ್|

ಇಸ್ಲಾಮಾಬಾದ್(ಮಾ.20): ಇಷ್ಟು ದಿನ ಭಾರತ, ಭಾರತೀಯರ ವಿರುದ್ಧ  ಕಿಡಿಕಾರುತ್ತಿದ್ದ ಪಾಕಿಸ್ತಾನ, ಇದೀಗ ಭಾರತದ ಹಿಂದೂಗಳ ವಿರುದ್ಧ ಮಾತನಾಡಿ ತನ್ನ ಸಣ್ಣತನ ಪ್ರದರ್ಶನ ಮಾಡಿದೆ.

ಭಾರತದ ಹಿಂದೂಗಳೇ ನಮಗೆ ಶತ್ರುಗಳು ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಶೇರ್ ಆಜಂ ವಾಜೀರ್ ಹೇಳಿದ್ದಾರೆ. ವಾಜೀರ್ ಹೇಳಿಕೆ ಖಂಡಿಸಿ ಅಲ್ಪಸಂಖ್ಯಾತ ಪ್ರತಿನಿಧಿಗಳಾದ ರವಿ ಕುಮಾರ್ ಮತ್ತು ರಂಜೀತ್ ಸಿಂಗ್ ಪ್ರಾಂತೀಯ ವಿಧಾನಸಭೆಯಿಂದ ಹೊರ ನಡೆದ ಘಟನೆಯೂ ನಡೆದಿದೆ.

ಇನ್ನು ತಮ್ಮ ಹೇಳಿಕೆಯಿಂದ ವಿವಾದ ಸೃಷ್ಟಿಯಾಗುತ್ತಿದ್ದಂತೇ ವಾಜೀರ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ. ಅಲ್ಲದೇ ತಾವು ಹಿಂದೂಸ್ಥಾನ ಎಂದು ಹೇಳುವ ಬದಲು ಹಿಂದೂಗಳು ಎಂದು ಹೇಳಿದ್ದಕ್ಕೆ ಕ್ಷಮೆ ಕೋರಿದ್ದಾರೆ.

ವಾಜೀರ್ ಕ್ಷಮೆಯ ಬಳಿಕ ರವಿ ಕುಮಾರ್ ಮತ್ತು ರಂಜೀತ್ ಸಿಂಗ್ ಅವರನ್ನು ಮರಳಿ ವಿಧಾನಸಭೆಗೆ ಕರೆತರಲಾಯಿತು. ಈ ವೇಳೆ ಮಾತನಾಡಿದ ರವಿ ಕುಮಾರ್ ಭಾರತದೊಂದಿಗೆ ನಮ್ಮ ಭಿನ್ನಾಭಿಪ್ರಾಯ ಇದೆಯೇ ಹೊರತು ಹಿಂದೂಗಳೊಂದಿಗೆ ಅಲ್ಲ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿತ್ತೂರು ಕರ್ನಾಟಕಕ್ಕೆ 5 ಸಾವಿರ ಕೋಟಿ ನೀಡಿ, ಇಲ್ಲವೇ ಪ್ರತ್ಯೇಕ ರಾಜ್ಯ ಕೊಡಿ: ಶಾಸಕ ರಾಜು ಕಾಗೆ
ಪುರುಷರಿಗೆ ಮಾತ್ರವಲ್ಲ ಮೊಬೈಲ್‌ ಸೇಫ್ಟಿಗೆ ಬಂದಿದೆ ಕಾಂಡೋಮ್‌, ಏನಿದು USB ಕಾಂಡೋಮ್‌?