ದೇಶಾದ್ಯಂತ 3 ವರ್ಷದಲ್ಲಿ ಬಿಸಿಯೂಟ ತಿಂದ 900 ಮಕ್ಕಳು ಅಸ್ವಸ್ಥ!

Published : Jul 15, 2019, 08:48 AM IST
ದೇಶಾದ್ಯಂತ 3 ವರ್ಷದಲ್ಲಿ ಬಿಸಿಯೂಟ ತಿಂದ 900 ಮಕ್ಕಳು ಅಸ್ವಸ್ಥ!

ಸಾರಾಂಶ

ಅಪೌಷ್ಠಿಕತೆ ನಿವಾರಣೆಗಾಗಿ ನೀಡುತ್ತಿರುವ ಮಧ್ಯಾಹ್ನದ ಊಟ| ದೇಶಾದ್ಯಂತ 3 ವರ್ಷದಲ್ಲಿ ಬಿಸಿಯೂಟ ತಿಂದ 900 ಮಕ್ಕಳು ಅಸ್ವಸ್ಥ: ಕೇಂದ್ರ

ನವದೆಹಲಿ[ಜು.15]: ದೇಶಾದ್ಯಂತ ಶಾಲಾ ಮಕ್ಕಳಿಗೆ ಅಪೌಷ್ಠಿಕತೆ ನಿವಾರಣೆಗಾಗಿ ನೀಡುತ್ತಿರುವ ಮಧ್ಯಾಹ್ನದ ಊಟದಲ್ಲಿನ ಗುಣಮಟ್ಟದ ವ್ಯತ್ಯಾಸದಿಂದ ಕಳೆದ 3 ವರ್ಷಗಳಲ್ಲಿ 900 ಮಕ್ಕಳು ಅಸ್ವಸ್ಥಗೊಂಡಿದ್ದರು. ಆದರೆ ಇಂಥ ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಕೇಂದ್ರಾಡಳಿತ ಪ್ರದೇಶ ಸೇರಿದಂತೆ 15 ರಾಜ್ಯಗಳಿಂದ ಈ ಕುರಿತು ಒಟ್ಟು 35 ದೂರುಗಳು ಬಂದಿವೆ. ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟದ ಬಗ್ಗೆ ತಕರಾರು ಸಲ್ಲಿಸಿವೆ. ಒಟ್ಟು 930 ಮಕ್ಕಳು ಅಸ್ವಸ್ಥಗೊಂಡು ಚಿಕಿತ್ಸೆಯಿಂದ ಸುಧಾರಿಸಿವೆ.

ಗುಣಮಟ್ಟದ ಆಹಾರ ಸಿದ್ಧಪಡಿಸಿ ಪೂರೈಸಲು ಸಂಬಂದಿಸಿದ ಎನ್‌ಜಿಒಗಳಿಗೆ ಕೇಂದ್ರ ನಿಯಮಾವಳಿ ರೂಪಿಸಿದ್ದು, ಆಹಾರವನ್ನು ಸ್ವತಃ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯವರು ರುಚಿ ಪರೀಕ್ಷಿಸಿದ ನಂತರ ಮಕ್ಕಳಿಗೆ ಬಡಿಸಲು ನಿರ್ದೇಶನ ನೀಡಿದೆ ಎಂದು ಮಾನವ ಸಂಪನ್ಮೂಲ ಮಂತ್ರಾಲಯ ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!