
ನವದೆಹಲಿ (ಡಿ.21): 125 ಕೋಟಿ ಭಾರತೀಯರ ಪೈಕಿ ಕೇವಲ ಶೇ.1ರಷ್ಟು ಮಂದಿ ಮಾತ್ರ ಆದಾಯ ತೆರಿಗೆ ಪಾವತಿ ಮಾಡುತ್ತಾರೆಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಹೇಳಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್’ಡಿಆರ್’ಎಫ್) ಆಯೋಜಿಸದ್ದ ನಗದು-ರಹಿತ ವ್ಯವಹಾರಗಳ ಬಗ್ಗೆ ಕಾರ್ಯಾಗಾರವೊಮದರಲ್ಲಿ ಭಾಗವಹಿಸಿ ಮಾತನಾಡಿದ ಕಾಂತ್, ಶೇ.95ರಷ್ಟು ನಗದು ಆರ್ಥಿಕತೆಯೊಂದಿಗೆ ದೇಶವು ಹೆಚ್ಚು ಪ್ರಗತಿ ಸಾಧಿಸುವುದು ಕಷ್ಟವೆಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತದಲ್ಲಿ 1 ಬಿಲಿಯನ್’ಕ್ಕಿಂತಲೂ ಹೆಚ್ಚು ಮೊಬೈಲ್ ಗ್ರಾಹಕರಿದ್ದಾರೆ, ಒಂದು ಬಿಲಿಯನ್’ಕ್ಕಿಂತ ಹೆಚ್ಚು ಮಂದಿ ಆಧಾರ್ ಹೊಂದಿದ್ದಾರೆ, 26 ಕೋಟಿ ಮಂದಿ ಜನ-ಧನ ಯೋಜನೆಯಡಿ ಖಾತೆ ಹೊಂದಿದ್ದಾರೆ, ಹಾಗೂ 26 ಕೋಟಿ ರೂಪೇ ಕಾರ್ಡ್’ಗಳನ್ನು ವಿತರಿಸಲಾಗಿದೆ, ಎಂದಿರುವ ಕಾಂತ್, ನಗದು-ರಹಿತ ರ್ಥಿಕತೆಯಾಗುವ ಕಾಲ ಸನ್ನಿಹಿತವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.