ನೃಪತುಂಗ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ: ಇಂದು ಸಿಎಂ ಸಿದ್ಧರಾಮಯ್ಯರಿಂದ ಲೋಕಾರ್ಪಣೆ

Published : May 16, 2017, 09:37 AM ISTUpdated : Apr 11, 2018, 12:47 PM IST
ನೃಪತುಂಗ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತ: ಇಂದು ಸಿಎಂ ಸಿದ್ಧರಾಮಯ್ಯರಿಂದ ಲೋಕಾರ್ಪಣೆ

ಸಾರಾಂಶ

ಸಿಲಿಕಾನ್ ಸಿಟಿಯ ಈ ರಸ್ತೆಗಳಲ್ಲಿ ಸಂಚರಿಸುವ ನಿಮಗೇ ನಾವೂ ಬೆಂಗಳೂರಿನಲ್ಲಿ ಇದ್ದೇವೆ ಎಂಬ ಅನುಮಾನ ಮೂಡದಿರುವುದು. ಯಾಕೆಂದರೆ ವಿದೇಶದಲ್ಲಿ ಕಾಣುವಂತಹ ರಸ್ತೆಗಳು ನಿರ್ಮಾಣವಾಗಿದೆ. ಹೌದು ಇಂದು ನೃಪತುಂಗ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.

ಬೆಂಗಳೂರು(ಮೇ.16): ಸಿಲಿಕಾನ್ ಸಿಟಿಯ ಈ ರಸ್ತೆಗಳಲ್ಲಿ ಸಂಚರಿಸುವ ನಿಮಗೇ ನಾವೂ ಬೆಂಗಳೂರಿನಲ್ಲಿ ಇದ್ದೇವೆ ಎಂಬ ಅನುಮಾನ ಮೂಡದಿರುವುದು. ಯಾಕೆಂದರೆ ವಿದೇಶದಲ್ಲಿ ಕಾಣುವಂತಹ ರಸ್ತೆಗಳು ನಿರ್ಮಾಣವಾಗಿದೆ. ಹೌದು ಇಂದು ನೃಪತುಂಗ ರಸ್ತೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.

ನೃಪತುಂಗ ರಸ್ತೆಯಲ್ಲಿ 2017ರ ಫೆಬ್ರವರಿ 27ರಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭಿಸಲಾಗಿತ್ತು. ಕೆಲಸ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಆರು ವಾರಗಳ ಗಡುವು ನೀಡಲಾಗಿತ್ತು. ಆದರೆ ನಿಗದಿತ ಅವಧಿಗೆ ಮುಗಿಯದೆ 10 ವಾರಗಳ ಬಳಿಕ ವೈಟ್ ಟಾಪಿಂಗ್ ಕೆಲಸ ಮುಗಿದಿದೆ. ಕಳೆದ ವಾರ ಸಂಚಾರಕ್ಕೆ ಮುಕ್ತವಾಗಿರುವ ನೃಪತುಂಗ ರಸ್ತೆ  ಲೋಕಾರ್ಪಣೆ ಆಗುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಇವತ್ತು ಲೋಕಾರ್ಪಣೆ ಮಾಡಲಿದ್ದಾರೆ.

ನೃಪತುಂಗ ರಸ್ತೆಯಲ್ಲಿ ಕಾಮಗಾರಿಗಾಗಿ ಕಬ್ಬನ್ ಪಾರ್ಕ್ ಉದ್ಯಾನವನದಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಮೆಜೆಸ್ಟಿಕ್'ನಿಂದ ಶೇಷಾದ್ರಿಪುರಂ ರಸ್ತೆ ಮೂಲಕ ಬರುವ ವಾಹನಗಳನ್ನು ಕೆ.ಆರ್.ವೃತ್ತದಿಂದ ಕಬ್ಬನ್ ಪಾರ್ಕ್ ಒಳರಸ್ತೆ ಮೂಲ್ಕ ಕಾರ್ಪೊರೇಷನ್ ಕಡೆಗೆ ಸಂಚರಿಸಲು ಅನುವು ಮಾಡಿಕೊಡಲಾಗಿತ್ತು. ಇದರಿಂದ ಉದ್ಯಾನವನದಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಿಪರೀತ ಹೊಗೆಯಿಂದ ಗಿಡಗಳು ಸಾವಿನ ಅಂಚಿನಲ್ಲಿವೆ ಅಂತ ಅಸಮಾಧಾನ ವ್ಯಕ್ತವಾಗಿತ್ತು.

ಇದರ ಜತೆಗೆ ಫೀಲ್ಡ್ ಮಾರ್ಷಲ್ ಕರಿಯಪ್ಪ ರಸ್ತೆ, ಜನರಲ್ ತಿಮ್ಮಯ್ಯ ರಸ್ತೆ, ಮ್ಯೂಸಿಯಂ ರಸ್ತೆ ಕೂಡಾ ಟೆಂಡರ್ ಶ್ಯೂರ್ ರಸ್ತೆಗಳಾಗಿ ಮಾರ್ಪಾಡು ಮಾಡಲಾಗಿದೆ. ಬರೋಬ್ಬರಿ 250 ಕೋಟಿ ವೆಚ್ಚದಲ್ಲಿ ನಗರದಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ರಸ್ತೆಗಳು ನಿರ್ಮಾಣ ಆಗಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ
ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!