ಆಪರೇಷನ್ ಕಾಂಗ್ರೆಸ್ : ಜೆಡಿಎಸ್ ಪ್ರಮುಖ ನಾಯಕನಿಗೆ ಕೈ ಗಾಳ ?

Published : Jan 09, 2018, 08:24 PM ISTUpdated : Apr 11, 2018, 12:35 PM IST
ಆಪರೇಷನ್  ಕಾಂಗ್ರೆಸ್ : ಜೆಡಿಎಸ್ ಪ್ರಮುಖ ನಾಯಕನಿಗೆ ಕೈ ಗಾಳ ?

ಸಾರಾಂಶ

, ಎಂ.ಸಿ.ನಾಣಯ್ಯ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ನನ್ನ ಮತ್ತು ಅವರು ಹಲವು ವರ್ಷಗಳ ಗೆಳೆಯರು ಹಾಗೂ ಅದಲ್ಲದೆ ನಾಣಯ್ಯ ಒಳ್ಳೆಯ ನಾಯಕರು. ನನಗೂ ನಾಣಯ್ಯಗೂ ಉತ್ತಮ ಒಡನಾಟವಿರುವುದರಿಂದ ಭೇಟಿ ನೀಡಲು ಬಂದಿದ್ದೆ

ಕೊಡಗು(ಜ.09): ಜೆಡಿಎಸ್ ಹಿರಿಯ ನಾಯಕ ಎಂ.ಸಿ.ನಾಣಯ್ಯ ಜತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಕಾಂಗ್ರೆಸ್'ಗೆ ಕರೆತರುವ ಪ್ರಯತ್ನ ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.

ಮಡಿಕೇರಿ ಪಟ್ಟಣದಲ್ಲಿರುವ ನಾಣಯ್ಯ ನಿವಾಸದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಸಿಎಂ, ತಮ್ಮ ಜೆಡಿಎಸ್ ಗೆಳತನದ ಬಗ್ಗೆ ಮೆಲುಕು ಹಾಕಿದ್ದಾರೆ. ಹಿಂದಿನಿಂದಲೂ ನಾಣಯ್ಯ ಅವರಿಗೆ ಸಿದ್ದರಾಮಯ್ಯ ಅವರೊಂದಿಗೆ ಹೆಚ್ಚಿನ ಬಾಂಧವ್ಯವಿದೆ. ಅಲ್ಲದೆ ಇತ್ತೀಚಿಗೆ ಜೆಡಿಎಸ್ ಬಗ್ಗೆಯೂ ಅತೃಪ್ತರಾಗಿರುವ ಅವರನ್ನು ಕಾಂಗ್ರೆಸ್'ಗೆ ಕರೆತರಬೇಕೆಂದು ಸಿದ್ದರಾಮಯ್ಯ ಅವರಿಗೆ ಬೆಂಬಲಿಗರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ನಾಣಯ್ಯ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಸಿ.ನಾಣಯ್ಯ ಅವರ ಆರೋಗ್ಯ ವಿಚಾರಿಸಲು ಬಂದಿದ್ದೆ. ನನ್ನ ಮತ್ತು ಅವರು ಹಲವು ವರ್ಷಗಳ ಗೆಳೆಯರು ಹಾಗೂ ಅದಲ್ಲದೆ ನಾಣಯ್ಯ ಒಳ್ಳೆಯ ನಾಯಕರು. ನನಗೂ ನಾಣಯ್ಯಗೂ ಉತ್ತಮ ಒಡನಾಟವಿರುವುದರಿಂದ ಭೇಟಿ ನೀಡಲು ಬಂದಿದ್ದೆ ಎಂದು ತಿಳಿಸಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ