
ನವದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ದಿನಕ್ಕೆ ಪೆಟ್ರೋಲ್ ದರ ಏರಿಕೆಯಾಗುತ್ತಲೇ ಸಾಗಿ ಜನರನ್ನು ಆತಂಕಕ್ಕೆ ದೂಡುತ್ತಿದೆ.
ಇದೇ ವೇಳೆ ದೇಶದ ಐದು ರಾಜ್ಯಗಳು ಏಕ ರೀತಿಯ ತೈಲ ದರವನ್ನು ಜಾರಿಗೆ ತರಲು ನಿರ್ಧಾರ ಮಾಡಿಕೊಂಡಿವೆ.
ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ನವದೆಹಲಿಯಲ್ಲಿ ಮೂರು ಪಕ್ಷಗಳು ಆಡಳಿತ ನಡೆಸುತ್ತಿವೆ. ಕಾಂಗ್ರೆಸ್, ಆಪ್, ಬಿಜೆಪಿ ಆಡಳಿತದಲ್ಲಿದ್ದು, ಏಕ ರೀತಿಯ ದರವನ್ನು ಕಾಯ್ದುಕೊಳ್ಳಲು ಸಭೆ ನಡೆಸುವ ಮೂಲಕ ನಿರ್ಧಾರ ಮಾಡಿವೆ.
ಒಂದು ದೇಶ ಒಂದು ಟ್ಯಾಕ್ಸ್ ಎನ್ನುವಂತೆ ಮಂಗಳವಾರ ಈ ಬಗ್ಗೆ ಎಲ್ಲಾ ರಾಜ್ಯಗಳ ಹಣಕಾಸು ಸಚಿವರು ಸಭೆಯೊಂದನ್ನು ನಡೆಸುವ ಮೂಲಕ ಏಕ ರೀತಿಯ ದರವನ್ನು ಜಾರಿ ಮಾಡಲು ನಿರ್ಧಾರ ಮಾಡಿದ್ದಾರೆ.
ದಿಲ್ಲಿಯಂತೆಯೇ ಎಕ್ಸೈಸ್ ಪಾಲಿಸಿಯನ್ನು ಜಾರಿ ತರುವ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಮದ್ಯಕ್ಕೂ ಕೂಡ ಒಂದೇ ರೀತಿಯ ದರವನ್ನು ವಿಧಿಸುವ ಬಗ್ಗೆ ಈ ವೇಳೆ ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.