
ನವದೆಹಲಿ(ಫೆ.16): ವೈಭವೋಪೇತ ಮದುವೆಗೆ ಕಡಿವಾಣ ಹಾಕಬೇಕೆಂಬ ಮಹತ್ವದ ಖಾಸಗಿ ವಿಧೇಯಕವೊಂದು ಲೋಕಸಭೆಯಲ್ಲಿ ಮಂಡನೆಯಾಗಿದೆ.
ಮದುವೆಯಲ್ಲಿ ವೈಭವದ ಪ್ರದರ್ಶನ ನಿಲ್ಲಬೇಕು, ಯಾವುದೇ ಕುಟುಂಬ ಐದು ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿದರೆ ಆ ಮೊತ್ತದ ಶೇಕಡಾ 10ರಷ್ಟನ್ನು ಬಡ ಕುಟುಂಬಗಳ ಮದುವೆಗೆ ಕೊಡುಗೆಯಾಗಿ ನೀಡಬೇಕು ಎಂದು ಸಂಸದ ಪಪ್ಪು ಯಾದವ್ ಅವರ ಪತ್ನಿ ಕಾಂಗ್ರೆಸ್ ಸಂಸದೆ ರಂಜಿತ್ ರಂಜನ್ ಮಂಡಿಸಿರುವ ವಿಧೇಯಕದಲ್ಲಿ ಆಗ್ರಹಿಸಲಾಗಿದೆ. ಮದುವೆ ವಿಧೇಯಕ 2016ನ್ನು ಮುಂದಿನ ಲೋಕಸಭೆ ಅಧಿವೇಶನದಲ್ಲಿ ಖಾಸಗಿ ವಿಧೇಯಕವಾಗಿ ಚರ್ಚೆಗೆ ಸ್ವೀಕರಿಸುವ ಸಾಧ್ಯತೆಗಳಿವೆ.
ವೈಭವೋಪೇತ ಅಬ್ಬರ ಮತ್ತು ಅನವಶ್ಯಕ ಖರ್ಚುಗಳನ್ನು ತಡೆಯುವುದು ಮತ್ತು ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ವಿಧೇಯಕ ಮಂಡಿಸಿದ್ದಾಗಿ ರಂಜಿತ್ ಹೇಳಿದ್ದಾರೆ.
ಕರ್ನಾಟಕದಲ್ಲೂ ಅದ್ಧೂರಿ ಮದುವೆಗೆ ಕಡಿವಾಣ
ಇದೇ ವೇಳೆ, ಅದ್ಧೂರಿ ಮದುವೆಗೆ ಕಡಿವಾಣ ಹಾಕುವ ಬಗ್ಗೆ ಕರ್ನಾಟಕ ಸರಕಾರವೂ ಚಿಂತನೆ ನಡೆದಿತ್ತು. ರಾಜ್ಯದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಬಹಿರಂಗವಾಗಿ ಈ ಬಗ್ಗೆ ಮಾತನಾಡಿದ್ದರು. ಆದರೆ, ವಿಧೇಯಕ ಮಂಡನೆಯಾಗಿರಲಿಲ್ಲ. ಈಗ ಕೇಂದ್ರ ಸರಕಾರ ಏನು ಮಾಡುತ್ತದೆ ಕಾದು ನೋಡಬೇಕು. ಕರ್ನಾಟಕದಲ್ಲೂ ಅದ್ಧೂರಿ ಮದುವೆಗೆ ಕಡಿವಾಣ ಹಾಕಲು ಸಚಿವ ರಮೇಶ್ ಕುಮಾರ್ ಸೇರಿದಂತೆ ಹಲವರು ಬೆಂಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.