
ನವದೆಹಲಿ: ಕಂಪನಿಗಳು ಸುಸ್ತಿದಾರರಾದರೂ, ಅವುಗಳ ಪ್ರವರ್ತಕರು ಯಾವುದೇ ಚಿಂತೆ ಇಲ್ಲದೇ ಆರಾಮಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಇಂಥ ಸುಸ್ತಿದಾರ ಕಂಪನಿಗಳ ಪ್ರವರ್ತಕರಿಗೆ ಮೂಗುಧಾರ ಹಾಕಲು ನಿರ್ಧರಿಸಿದೆ.
ಇಂಥ ಯಾವುದೇ ಸುಸ್ತಿದಾರ ಕಂಪನಿಗಳ ಪ್ರವರ್ತಕರ ವಿದೇಶ ಭೇಟಿಗೆ ಕಡಿವಾಣ ಹಾಕುವ ಮತ್ತು ಅವರ ವಿದೇಶಿ ವಹಿವಾಟಿನಲ್ಲಿ ದಿಢೀರನೆ ಆಗಿರುವ ಏರಿಕೆಯನ್ನು ಪರಿಶೀಲಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಕ್ರಮಗಳನ್ನು ಜಾರಿಗೊಳಿಸಲು ಆರ್ಬಿಐ ಮತ್ತು ಹಣಕಾಸು ಗುಪ್ತಚರ ಸಂಸ್ಥೆಯ ನೆರವನ್ನು ಸರ್ಕಾರ ಪಡೆಯಯಲಿದೆ ಎನ್ನಲಾಗಿದೆ.
ಹಲವು ಪ್ರಕರಣಗಳಲ್ಲಿ, ಸುಸ್ತಿದಾರ ಕಂಪನಿಗಳ ಪ್ರವರ್ತರು ವಿದೇಶಕ್ಕೆ ಪರಾರಿಯಾಗುವ ಮುನ್ನು ಅವರು ವಿದೇಶಗಳಲ್ಲಿ ಹೊಂದಿರುವ ಸಹಸಂಸ್ಥೆಗಳ ಹಣಕಾಸು ವ್ಯವಹಾರದಲ್ಲಿ ದಿಢೀರನೇ ಏರಿಕೆಯಾಗಿರುವುದು ಕಂಡುಬಂದಿದೆ. ಹೀಗಾಗಿ ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.