
ನವದೆಹಲಿ: ರೈಲ್ವೆ ಪ್ರಯಾಣದ ವೇಳೆ ಆಹಾರ ತಿಂಡಿತಿನಿಸುಗಳನ್ನು ಖರೀದಿಸಿದರೆ, ದುಬಾರಿ ಮೊತ್ತ ಪಾವತಿಸಬೇಕಾದ ಅನಿವಾರ್ಯತೆಯ ಅನುಭವ ಬಹುತೇಕರಿಗೆ ಆಗಿರುತ್ತದೆ.
ರೈಲ್ವೆ ಪ್ರಯಾಣಿಕರಿಂದ ಹೆಚ್ಚುವರಿ ಮೊತ್ತ ವಸೂಲಿ ಮಾಡುವ ರೈಲ್ವೆ ಕ್ಯಾಟರರ್ಗಳಿಗೆ ನಿಯಂತ್ರಣ ಹೇರುವ ಸಲುವಾಗಿ ಸರ್ಕಾರ ಹೊಸ ನಿರ್ಧಾರಕ್ಕೆ ಬಂದಿದೆ. ರೈಲಿನಲ್ಲಿ ಯಾವುದೇ ಆಹಾರ ಪೂರೈಕೆದಾರನು ಪ್ರಯಾಣಿಕನಿಗೆ ಬಿಲ್ ಕೊಡಲಿಲ್ಲವೆಂದಾದಲ್ಲಿ, ಪ್ರಯಾಣಿಕನು ಆ ಆಹಾರಕ್ಕೆ ಹಣ ಕೊಡಬೇಕಾಗಿಲ್ಲ ಎಂಬ ನೀತಿ ಜಾರಿಗೊಳಿಸಲಾಗಿದೆ.
ಅಂದರೆ, ಬಿಲ್ ನೀಡಲಿಲ್ಲ ಎಂದಾದಲ್ಲಿ, ಉಚಿತ ಆಹಾರ ನೀತಿಯನ್ನು ಜಾರಿಗೊಳಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ರೈಲ್ವೆ ಕ್ಯಾಟರರ್ಗಳು ಹೆಚ್ಚು ಬೆಲೆ ಪಡೆಯುತ್ತಾರೆ ಎಂಬ ದೂರು ಸಾಕಷ್ಟಿದೆ. ಕಳೆದ ವರ್ಷ ಏಪ್ರಿಲ್ನಿಂದ ಅಕ್ಟೋಬರ್ ನಡುವೆ ಹೆಚ್ಚು ದರ ವಿಧಿಸುವ ಕುರಿತಾದ 7,000 ದೂರುಗಳು ದಾಖಲಾಗಿವೆ. ಹೊಸ ನೀತಿ ಬಗ್ಗೆ ಮಾ.31ರೊಳಗೆ ಎಲ್ಲ ರೈಲುಗಳಲ್ಲಿ ಪ್ರಕಟಣೆಗಳನ್ನು ಹೊರಡಿಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.