ಹಿಡಿದ ಹಾವಿಗೆ ಮುತ್ತಿಕ್ಕಿ ಸತ್ತ..!

Published : Feb 06, 2017, 12:31 PM ISTUpdated : Apr 11, 2018, 12:59 PM IST
ಹಿಡಿದ ಹಾವಿಗೆ ಮುತ್ತಿಕ್ಕಿ ಸತ್ತ..!

ಸಾರಾಂಶ

ಹಾವಿನ ಹೆಡೆಗೆ ಮುತ್ತಿಕ್ಕುತ್ತಿರುವ ಫೋಟೋ ತೆಗೆಸಿಕೊಳ್ಳಲು ಹೊರಟಿದ್ದಾನೆ. ಅಷ್ಟರಲ್ಲೇ, ಹಾವು ಏಕಾಏಕಿ ತಿರುಗಿ, ಸೋಮನಾಥ್‌'ನ ಎದೆಗೆ ಕಚ್ಚಿದ್ದರಿಂದ, ಆತ ಸಾವಿಗೀಡಾಗಿದ್ದಾನೆ.

ಮುಂಬೈ(ಫೆ.06): ಹಾವು ಹಿಡಿಯುವುದರಲ್ಲಿ ನಿಪುಣನಾಗಿದ್ದ ಯುವಕನೊಬ್ಬ ಅದಕ್ಕೆ ಮುತ್ತು ನೀಡಲು ಹೋಗಿ ಜೀವಕ್ಕೇ ಕುತ್ತು ತಂದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.

ಸಿಬಿಡಿ ಬೇಲಾಪುರ ನಿವಾಸಿ ಸೋಮನಾಥ್‌'ಗೆ, ವ್ಯಕ್ತಿಯೊಬ್ಬರ ಕಾರಿನಲ್ಲಿ ನಾಗರಹಾವೊಂದು ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಸೋಮನಾಥ್ ಅಲ್ಲಿಗೆ ತೆರಳಿ, ಹಾವನ್ನು ಜೀವಂತವಾಗಿ ಸೆರೆಹಿಡಿದಿದ್ದಾನೆ.

ನಂತರ, ಹಾವಿನ ಹೆಡೆಗೆ ಮುತ್ತಿಕ್ಕುತ್ತಿರುವ ಫೋಟೋ ತೆಗೆಸಿಕೊಳ್ಳಲು ಹೊರಟಿದ್ದಾನೆ. ಅಷ್ಟರಲ್ಲೇ, ಹಾವು ಏಕಾಏಕಿ ತಿರುಗಿ, ಸೋಮನಾಥ್‌'ನ ಎದೆಗೆ ಕಚ್ಚಿದ್ದರಿಂದ, ಆತ ಸಾವಿಗೀಡಾಗಿದ್ದಾನೆ.

ಈತ ಈವರೆಗೆ 100ಕ್ಕೂ ಹೆಚ್ಚು ವಿಷಜಂತುಗಳನ್ನು ಸೆರೆಹಿಡಿದಿದ್ದಾನೆ. ಕಳೆದ 12 ವರ್ಷಗಳಲ್ಲಿ ಹಾವಿನಿಂದಲೇ ಕಚ್ಚಿಸಿಕೊಂಡು ಮೃತಪಟ್ಟ ಇಂಥವರ ಪೈಕಿ ಸೋಮನಾಥ್ 31ನೆಯವ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ, ವಿವಿಐಪಿಗೆ ಐದು ಹೆಲಿಪ್ಯಾಡ್ ವ್ಯವಸ್ಥೆ!
ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ