
ಹೈದರಾಬಾದ್(ಆ.17): ಸೌತ್ ಇಂಡಿಯನ್ ಆ್ಯಕ್ಟರ್ ನಂದಮುರಿ ಬಾಲಕೃಷ್ಣ ತನ್ನ ಕೋಪದಿಂದಲೇ ಫೇಮಸ್ ಆದವರು. ಬುಧವಾರದಂದು ರಾಥ್ರಿ ಅವರು ಹೈದರಾಬಾದ್'ನಿಂದ 200ಕಿ. ಮೀ ದೂರದಲ್ಲಿರುವ ನಂದಯಾಲ ಉಪ ಚುನಾವಣೆ ಪ್ರಚಾರಕ್ಕಾಗಿ ತೆರಳಿದ್ದರು. ವಿಡಿಯೋದಲ್ಲಿ ತೆಲುಗು ದೇಶಂ ಪಾರ್ಟಿಯ ನೇತಾರ ನಟ ಬಾಲಕೃಷ್ಣರವರನ್ನು ಬೆಂಬಲಿಗರು ಮತ್ತು ಅಭಿಮಾನಿಗಳು ಸುತ್ತುವರೆದಿದ್ದರು. ಆದರೆ ಈ ನಡುವೆ ಅಭಿಮಾನಿಯೊಬ್ಬ ಬಾಲಕೃಷ್ಣರೊಂದಿಗೆ ಸೆಲ್ಫೀ ತೆಗೆಸಿಕೊಳ್ಳುವ ಧಾವಂತದಲ್ಲಿ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಸಿಟ್ಟಾದ ನಂದಮುರಿ ಆ ವ್ಯಕ್ತಿಯ ಕೆನ್ನೆಗೆ ಬಾರಿಸಿ ಮುಂದೆ ಹೋಗುತ್ತಾರೆ.
ಬಾಲಕೃಷ್ಣ ಹೀಗೆ ಸಾರ್ವಜನಿಕವಾಗಿ ಹೊಡೆಯುವುದು ಇದೇ ಮೊದಲಲ್ಲ, ಆಗಸ್ಟ್ ಮೊದಲ ವಾರದಲ್ಲಿ ಫಿಲ್ಮ್ ಸೆಟ್'ನಲ್ಲಾದ ಘಟನೆಯೊಂದರ ವಿಡಿಯೋ ಒಂದು ಲೀಕ್ ಆಗಿದ್ದು, ಇದರಲ್ಲಿ ನಂದಮುರಿ ಫಿಲ್ಮ್ ಸೆಟ್'ನಲ್ಲಿ ಓರ್ವ ಸಹಾಯನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ತನ್ನ ಶೂಗಳಿಂದಲೂ ಹೊಡೆದಿದ್ದರು ಎಂದು ತಿಳಿಸದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.