
ಬೆಂಗಳೂರು (ಮಾ. 09): ಮೆಟ್ರೋ ಆಡಳಿತ ಮಂಡಳಿ ಹಾಗೂ ನೌಕರರ ನಡುವಿನ ಸಂಘರ್ಷ ಮುಂದುವರೆದಿದೆ.
22 ರ ಮೆಟ್ರೋ ನೌಕರರ ಮುಷ್ಕರಕ್ಕೆ ಹತ್ತಿಕ್ಕಲು ಎಸ್ಮಾ ಜಾರಿ ಬೆದರಿಕೆ ಹಿನ್ನೆಲೆ ಸಂಘದಿಂದ ತುರ್ತು ಸುದ್ದಿಗೋಷ್ಟಿ ನಡೆಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಮೆಟ್ರೋ ನೌಕರರ ಮೇಲೆ ಎಸ್ಮಾ ಜಾರಿ ಮಾಡೋಕೆ ಬರುವುದಿಲ್ಲ. ಬಿಎಂಆರ್’ಸಿಲ್ ಒಂದು ಕೇಂದ್ರ ಸರ್ಕಾರದ ಉದ್ಯಮ. ಕೇಂದ್ರ ಸರ್ಕಾರದ ಎಸ್ಮಾ ಜಾರಿ ಅನ್ವಯವಾಗುತ್ತೆ ಹೊರತು ರಾಜ್ಯ ಸರ್ಕಾರಕ್ಕೆ ಅನ್ವಯವಾಗುವುದಿಲ್ಲ.
ಮಾರ್ಚ್ 22 ರಂದು ಮೆಟ್ರೋ ಸೇವೆ ಸ್ಥಗಿತ ಮಾಡುತ್ತೇವೆ. ನಮ್ಮ ಮುಷ್ಕರವನ್ನ ನೋಡಿ ಮೆಟ್ರೋ ಎಂಡಿ ಎಸ್ಮಾ ಬೆದರಿಕೆ ಹಾಕಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಮುಷ್ಕರ ವಾಪಸ್ ತೆಗೆದುಕೊಳ್ಳುವುದಿಲ್ಲ. ವೇತನ ಹೆಚ್ಚಳ ಸೇರಿದಂತೆ ಮೆಟ್ರೋ ಅಧಿಕಾರಿಗಳ ಕಿರುಕುಳ ನಿಲ್ಲಬೇಕು. 8 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಮೆಟ್ರೋ ನೌಕರರಿಗೆ ಬಡ್ತಿಗೆ ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಸಂಘ ಒತ್ತಾಯಿಸಿದೆ.
ಇನ್ನಷ್ಟು ಬೇಡಿಕೆಗಳನ್ನ ಕೂಡಲೆ ಬಗೆಹರಿಸಬೇಕೆಂದು ಸಂಘದ ಒತ್ತಾಯ. ಮಾತುಕತೆಗೆ ಕರೆದು ಬೇಡಿಕೆಗಳನ್ನಾ ಈಡೇರಿಸಿದರೆ ಕರೆ ಕೊಟ್ಟಿರುವ ಮುಷ್ಕರ ವಾಪಸ್ ಪಡೆಯುತ್ತೇವೆ ಎಂದು ಮೆಟ್ರೋ ಯೂನಿಯನ್ ಅಧ್ಯಕ್ಷ ಸೂರ್ಯನಾರಾಯಣ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.