
ನವದೆಹಲಿ(ಆ.24): ಹಿಂದೂಗಳ ಪವಿತ್ರ ಯಾತ್ರಾ ತಾಣ ಕಾಶಿ (ವಾರಾಣಸಿ)ಯಲ್ಲಿರುವ ಕರ್ನಾಟಕ ಸರ್ಕಾರದ ಅತಿಥಿ ಗೃಹ ರಾಜ್ಯದ ಯಾತ್ರಿಗಳ ಬಳಕೆಗೆ ಮತ್ತೆ ಸಿದ್ಧವಾಗಿದೆ.
ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1923ರಲ್ಲಿ ಕಟ್ಟಿಸಿದ್ದ ಈ ವಸತಿಗೃಹವು ನವೀಕರಣ ಕಾಮಗಾರಿ ನಡೆಯುತ್ತಿದ್ದ ಕಾರಣ ಕಳೆದ 15 ತಿಂಗಳಿನಿಂದ ಮುಚ್ಚಲ್ಪಟ್ಟಿತ್ತು. ಇದೀಗ ಸುಮಾರು 2 ಕೋಟಿ ರು. ವೆಚ್ಚದಲ್ಲಿ ನವೀಕರಣ ಕಾಮಗಾರಿ ಮುಕ್ತಾಯಗೊಂಡಿದ್ದು ಕರ್ನಾಟಕದ ಯಾತ್ರಿಗಳಿಗೆಕೊಠಡಿ ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ವಸತಿ ಗೃಹದಲ್ಲಿ 18 ಕೊಠಡಿಗಳಿವೆ. ಅದರಲ್ಲಿ 4 ಬೆಡ್'ಗಳ 12 ಕೊಠಡಿ ಇದ್ದು ಈ ಕೊಠಡಿಗೆ ಒಂದು ದಿನದ ಬಾಡಿಗೆ ₹750, ಎರಡು ಬೆಡ್'ಗಳ ಐದು ಕೊಠಡಿ ಇದ್ದು ಈ ಕೊಠಡಿಗೆ ದಿನಕ್ಕೆ ₹500, 25ರಿಂದ 30 ಮಂದಿ ಉಳಿದುಕೊಳ್ಳಬಹುದಾದ ಒಂದು ಹಾಲ್ ಇದ್ದು ದಿನದ ಬಾಡಿಗೆ ₹1000 ಆಗಿದೆ.
ಕಾಶಿ ಹನುಮಾನ್ ಘಾಟ್'ನ ಗಂಗಾನದಿ ತಟದಲ್ಲೇ ಇರುವ ಈ ವಸತಿಗೃಹದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಇದರ ವ್ಯವಸ್ಥಾಪಕರಾದ ವೆಂಕಟೇಶ್ಮೂರ್ತಿ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ. ಇವರನ್ನು 05426540752 ಅಥವಾ 7081667943 ಮೂಲಕ ಸಂಪರ್ಕಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.