29 ಬಾರಿ ಪ್ರಧಾನಿ ಭೇಟಿ ಮಾಡಲು ತೆರಳಿದರೂ ಪ್ರಯೋಜನವಾಗಿಲ್ಲ : ಚಂದ್ರಬಾಬು ನಾಯ್ಡು

Published : Mar 08, 2018, 12:11 PM ISTUpdated : Apr 11, 2018, 12:57 PM IST
29 ಬಾರಿ ಪ್ರಧಾನಿ ಭೇಟಿ ಮಾಡಲು ತೆರಳಿದರೂ ಪ್ರಯೋಜನವಾಗಿಲ್ಲ : ಚಂದ್ರಬಾಬು ನಾಯ್ಡು

ಸಾರಾಂಶ

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಅಮರಾವತಿ : ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನೂ ಅವರು ಪ್ರಸ್ತಾಪಿಸಿದ್ದಾರೆ.  ಕಾಂಗ್ರೆಸ್ ಯಶಸ್ವಿಯಾಗಿ  ತೆಲಂಗಾಣ ಎಂಬ ಮಗುವನ್ನು ಹೆತ್ತಿತು. ಆದರೆ ತಾಯಿಯನ್ನೇ ಕೊಂದಿತು ಎಂದಿರುವ ಮಾತನ್ನು ಪ್ರಸ್ತಾಪ ಮಾಡಿದರು. ಕೇಂದ್ರ ಆಂಧ್ರ ಪ್ರದೇಶಕ್ಕೆ ಸೂಕ್ತ ಹಣವನ್ನು ಬಿಡುಗಡೆ ಮಾಡುವಲ್ಲಿ  ಹಿಂದೇಟು ಹಾಕಿದೆ ಎಂದರು.

ತಾವು ದಿಲ್ಲಿಗೆ 29 ಬಾರಿ  ಭೇಟಿ ನೀಡಿ ಆಂಧ್ರ ಪ್ರದೇಶದ ಬಗ್ಗೆ ಪ್ರಸ್ತಾಪ ಮಾಡಲು ಯತ್ನಿಸಿದ್ದೆ. ಆದರೆ ಇದರಿಂದ ಯಾವುದೇ ರೀತಿಯಾದ ಪ್ರಯೋಜನವಾಗಿಲ್ಲ. ಎಲ್ಲಾ ಯೋಜನೆಗಳಿಗೂ ಭರವಸೆಯನ್ನಷ್ಟೇ ನೀಡಿದ ಕೇಂದ್ರ ಸರ್ಕಾರ ಅವನ್ನು ಈಡೇರಿಸುವಲ್ಲಿ ಮಾತ್ರ ಹಿಂದೇಟು ಹಾಕಿದೆ. 

ಯಾವುದೇ ಭರವಸೆಯೂ ಕೂಡ ಈಡೇರಿಲ್ಲ ಎಂದು ಚಂದ್ರಬಾಬು ನಾಯ್ಡು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಂಧ್ರ ಪ್ರದೇಶಕ್ಕೆ 19 ರೀತಿಯಾದ ಭರವಸೆಗಳನ್ನು ನೀಡಿದ್ದ ಕೇಂದ್ರ ಸರ್ಕಾರ ಯಾವ ಭರವಸೆಯನ್ನೂ  ಕೂಡ ಈಡೇರಿಸಿಲ್ಲ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!
ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಸೋನಿಯಾ ಗಾಂಧಿಗೆ ಕೇರಳ ಚುನಾವಣೆಯಲ್ಲಿ ಸೋಲು