Video: ನನಗೆ ಮತ ಹಾಕದವರಿಗೆ ಮುಂದೈತೆ ಮಾರಿ ಹಬ್ಬ: ಬಿಜೆಪಿ ನಾಯಕಿ ಮಾತು ಅಬ್ಬಬ್ಬಾ!

Published : Dec 14, 2018, 02:09 PM ISTUpdated : Dec 14, 2018, 02:17 PM IST
Video: ನನಗೆ ಮತ ಹಾಕದವರಿಗೆ ಮುಂದೈತೆ ಮಾರಿ ಹಬ್ಬ: ಬಿಜೆಪಿ ನಾಯಕಿ ಮಾತು ಅಬ್ಬಬ್ಬಾ!

ಸಾರಾಂಶ

ಬಿಜೆಪಿ ಮಹಿಳಾ ಅಭ್ಯರ್ಥಿಯೊಬ್ಬರು ತನಗೆ ಮತ ಹಾಕದ ಮತದಾರರು ಕಣ್ಣೀರು ಹರಿಸುವಂತೆ ಮಾಡುತ್ತೇನೆ ಎಂದು ಸಾರ್ವಜನಿಕವಾಗೇ ಬೆದರಿಕೆ ಹಾಕಿದ ವಿಡಿಯೋ ಒಂದು ವೈರಲ್ ಆಗಿದೆ.

ಭೋಪಾಲ್[ಡಿ.14]: ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಅನಿರೀಕ್ಷಿತ ಸೋಲು ಎದುರಾಗಿದೆ. ಬಿಜೆಪಿ ಭದ್ರ ಕೋಟೆಯಂತಿದ್ದ ಮಧ್ಯಪ್ರದೇಶದಲ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರ ನಡೆಸಲಿದೆ. ಶಿವರಾಜ್ ಸಿಂಗ್ ಚೌಹಾನ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಅರ್ಚನಾ ಚಿಟ್ನೀಸ್ ಬುರ್ಹಾನ್‌ಪುರ್‌ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಆದರೀಗ ಸೋಲಿನ ಬೆನ್ನಲ್ಲೇ ಸಚಿವೆ ನೀಡಿರುವ ಹೇಳಿಕೆ ಮಾತ್ರ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಬುರ್ಹಾನ್‌ಪುರ್‌ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಠಾಕೂರ್ ಸುರೇಂದ್ರ್ ಸಿಂಗ್‌ರಿಂದ 5120 ಮತಗಳ ಅಂತರದಿಂದ ಸೋಲನುಭವಿಸಿದ ಅರ್ಚನಾ ಸಾರ್ವಜನಿಕ ಸಭೆಯೊಂದರಲ್ಲಿ ಮತದಾರರಿಗೆ ಬೆದರಿಕೆ ಹಾಕಿದ್ದಾರೆ.

ಸೋಲಿನ ಬಳಿಕ ಅರ್ಚನಾ ಚಿಟ್ನೀಸ್‌ರವರ ಈ ವಿಡಿಯೋ ಭಾರೀ ವೈರಲ್ ಆಗಿದೆ. 'ಅಧಿಕಾರದಲ್ಲಿದ್ದಾಗ ನಾನೇನು ಮಾಡಿದ್ದೆನೋ, ಅಂತಹುದೇ ಪಾತ್ರ ಅಧಿಕಾರ ಇಲ್ಲದಿದ್ದರೂ ಸಮರ್ಥವಾಗಿ ನಿಭಾಯಿಸುತ್ತೇನೆ. ಯಾರೆಲ್ಲಾ ನನಗೆ ತಮ್ಮ ಮತ ನೀಡಿದ್ದಾರೋ ಅವರನ್ನು ತಲೆಬಾಗಲು ಬಿಡುವುದಿಲ್ಲ. ಆದರೆ ಎಡವಟ್ಟಿನಿಂದ, ಭಯದಿಂದ ಅಥವಾ ಯಾವುದಾದರೂ ಆಮಿಷಕ್ಕೊಳಗಾಗಿ ನನಗೆ ಮತ ನೀಡದವರನ್ನು ಕಣ್ಣೀರು ಹರಿಸದಿದ್ದರೆ ನನ್ನ ಹೆಸರು ಅರ್ಚನಾ ಚಿಟ್ನೀಸ್‌ ಅಲ್ಲ. ನನಗೆ ಮತ ಹಾಕದವರು ಪಶ್ಚಾತಾಪ ಪಡುವಂತೆ ಮಾಡುತ್ತೇನೆ' ಎಂದಿದ್ದಾರೆ.

"

ಸದ್ಯ ಅಧಿಕಾರ ಪಡೆದಿರುವ ಕಾಂಗ್ರೆಸ್ ಕಮಲನಾಥ್‌ರನ್ನು ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದೆ. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕಮಲನಾಥ್ ಪಕ್ಷದ ಹೈಕಮಾಂಡ್ ಹಾಗೂ ಮಂದ್ಯಪ್ರದೇಶದ ಜನರಿಗೆ ಧವನ್ಯವಾದ ತಿಳಿಸಿದ್ದಾರೆ. 'ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ, ಪಕ್ಷಕ್ಕೆ ಸರ್ಕಾರ ನಡೆಸಲು ಮತ ಹಾಕಿದ ರಾಜ್ಯ ರಾಜ್ಯದ ಜನರಿಗೆ ಅಭಾರಿಯಾಗಿದ್ದೇನೆ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: Gold Silver Price Today - ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?